ಕಟೀಲಮ್ಮನ ಮಹಿಮೆ ಕವಿತೆ – ಸವಿತಾ ಅರುಣ್ ಶೆಟ್ಟಿ



ಕಟೀಲಮ್ಮನ ಮಹಿಮೆ ಕುರಿತು ಕವಿಯತ್ರಿ ಸವಿತಾ ಅರುಣ್ ಶೆಟ್ಟಿ ಅವರು ಭಕ್ತಿಪೂರ್ವಕವಾಗಿ ಬರೆದ ಪದ್ಯವಿದು…ಕಟೀಲಮ್ಮನ ಆಶೀರ್ವಾದ ಎಲ್ಲರ ಮೇಲಿರಲಿ…

ನೀನೊಂದು ಸುಂದರ ಮಾಯೆ
ಓ ಜಗನ್ಮಾತೆ,ನೀ ಎಮ್ಮ ಪೊರೆಯೆ
ನೀ ನಿತ್ಯ ಸತ್ಯ ಸುಂದರಿ
ಕಟೀಲಿನಲಿ ನೆಲೆ ನಿಂತ ಶ್ರೀ ಭ್ರಾಮರಿ
ಭಕ್ತಿಯ ಪ್ರಾರ್ಥನೆಯ ನೀ ಆಲಿಸು
ಸದಾ ಮನದಲ್ಲಿ ನೀನೇ ನೆಲೆಸು .

ಭಗವದ್ಭಕ್ತಿಯಿಂದಲೇ ಜೀವನ ಪಾವನ
ನಿನ್ನ ದಯೆಯಿಂದಲೇ ಸುಮಧುರವಾಗಲಿ ಜೀವನಗಾನ
ಆಚರ ಸಚರಗಳಲಿ ಜೀವ ಸಂಚಲನ
ಹರಿಸಲಿ ನಿನ್ನ ಕೀರ್ತನೆ ,ಭಕ್ತಿಗಾಯನ.

ಸಕಲ ಜೀವಕೋಟಿಗಳ ಅಮ್ಮ ನೀನು
ಸಕಲ ಭಗವದ್ಭಕ್ತರ ಸ್ಫೂರ್ತಿ ನೀನು
ನಿನ್ನೊಲುಮೆಯಿರಲಿ ,ತಾಯೆ ಭ್ರಮರಾಂಬೆ .
ನೀನಿಲ್ಲದಿರೆ ಜಗವೇ ಇಲ್ಲವೆಂಬೆ

ಅಮ್ಮ, ನೀನೊಂದು ಸುಂದರ ಮಾಯೆ
ಓ ಜಗನ್ಮಾತೆ, ನೀ ಎಮ್ಮ ಪೊರೆಯೆ.


  • ಸವಿತಾ ಅರುಣ್ ಶೆಟ್ಟಿ (ಯುವ ಲೇಖಕರು, ಕವಿಯತ್ರಿ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW