ಮಂಗಲ್ ಪಾಂಡೆ ಹೆಸರು ಭಾರತೀಯ ಪಾಲಿಗೆ ಅಚ್ಚಳಿಯದ ನೆನಪು

ಮೊದಲ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೆಜ್ಜೆಗೆ ನಾಂದಿ ಹಾಡಿದ ಮಂಗಲ್ ಪಾಂಡೆ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಬಲಿದಾನಗಳು, ಹೋರಾಟಗಳು ನಡೆದಿವೆ. ಪ್ರತಿ ಹೋರಾಟವು ಒಂದೊಂದು ಘಟನೆಗಳಿಗೆ ಸಾಕ್ಷಿಯಾಗಿವೆ. ಮಂಗಲ್ ಪಾಂಡೆ ಅವರ ಕುರಿತು ಡಾ.ಗುರುಪ್ರಸಾದ್ ರಾವ್ ಹವಲ್ದಾರ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಹೋರಾಡಿ ತಮ್ಮ ಪ್ರಾಣ ತ್ಯಾಗಗೈದಿದ್ದಾರೆ. ಅವರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೆಜ್ಜೆಗೆ ನಾಂದಿ ಹಾಡಿದ , ಕ್ರಾಂತಿಕಾರಿ ಸೈನಿಕ, ಭಗತ್ ಸಿಂಗ್ ಗೆ ಸ್ಫೂರ್ತಿಯಾಗಿದ್ದ. ಬ್ರಿಟಿಷ್ ರ ವಿರುದ್ಧ ಮೊದಲ ಬಾರಿಗೆ ದೇಶದಾದ್ಯಂತ ಹೋರಾಡಲು ಮತ್ತು 1857 ನೇ ಸಿಪಾಯಿ ದಂಗೆಗೆ ಪ್ರೇರಣೆಯಾದ ಕ್ರಾಂತಿಕಾರಿ ಮಂಗಲ್ ಪಾಂಡೆ ಜನ್ಮ ದಿನವಿಂದು, ಅವರ ಧೈರ್ಯ, ದೇಶಭಕ್ತಿಯನ್ನು ನೆನಪಿಸಿಕೊಳ್ಳುವುದಕ್ಕೆ ಇದೊಂದು ಸುಸಂದರ್ಭ.

ಮಂಗಲ್ ಪಾಂಡೆ ಹುಟ್ಟಿದ್ದು, ಜುಲೈ 19, 1827 ರಲ್ಲಿ. ಈಗಿನ ಉತ್ತರ ಪ್ರದೇಶದ ಬಾಲ್ಲಿಯಾ ಜಿಲ್ಲೆಯ ನಾಗ್ವಾ ಎಂಬ ಹಳ್ಳಿಯಲ್ಲಿ ಬ್ರಾಹ್ಮಣ ಕುಟುಂಬದ ದಿವಾಕರ್ ಪಾಂಡೆ, ಅಭೈರಾಣಿ ಪಾಂಡೆ ದಂಪತಿಗಳ ಮಗನಾಗಿ ಜನಿಸಿದ ಮಂಗಲ್ ಪಾಂಡೆ, ತನ್ನ 22 ನೇ ವರ್ಷದಲ್ಲಿ ಮೂರು ಬ್ರಿಟಿಷ್ ಇಂಡಿಯಾ ಪ್ರೆಸಿಡೆನ್ಸಿಗಳಲ್ಲಿ ಒಂದಾದ ಬೆಂಗಾಲ್ ಪ್ರೆಸಿಡೆನ್ಸಿಯ ಬ್ರಿಟಿಷ್ ಮಿಲಿಟರಿ ಕಂಟೋನ್ಮೆಂಟ್ನಲ್ಲಿ  34 ನೇ ಬಂಗಾಳ ಸ್ಥಳೀಯ ಪದಾತಿಸೈನ್ಯದ (B.N.I.) ರೆಜಿಮೆಂಟ್ನ 5 ನೇ ಕಂಪನಿಯಲ್ಲಿ ಖಾಸಗಿ ಸೈನಿಕರಾಗಿ ಸೇರಿಕೊಂಡರು. ರೆಜಿಮೆಂಟಿನಲ್ಲಿ ಹಲವಾರು ಬ್ರಾಹ್ಮಣರಿದ್ದರು.

ಫೋಟೋ ಕೃಪೆ : google

ಮತ್ತು ಅದರ ಕೊಳಕು ಕಾರ್ಟ್ರಿಡ್ಜ್ಗಳನ್ನು ತುದಿಗಳಲ್ಲಿ ಕಚ್ಚಿದ ನಂತರ ಮಾತ್ರ ಆಯುಧಕ್ಕೆ ನೀಡಬಹುದು. ಕಾರ್ಟ್ರಿಜ್ಗಳ ಲೂಬ್ರಿಕಂಟ್ ಹಂದಿ ಅಥವಾ ಹಸುವಿನ ಕೊಬ್ಬು ಎಂದು ವದಂತಿಗಳಿವೆ. ಹಿಂದೂಗಳು ಹಸುಗಳನ್ನು ಹೆಚ್ಚು ಗೌರವಿಸುತ್ತಾರೆ, ಆದರೆ ಮುಸ್ಲಿಮರು ಹಂದಿಮಾಂಸವನ್ನು ತಿನ್ನಲು ಅನುಮತಿಸುವುದಿಲ್ಲ, ಇದು ಭಾರತೀಯ ಸಿಪಾಯಿಗಳ ಕೋಪಕ್ಕೆ ಕಾರಣವಾಯಿತು. ಆ ಸಮಯದಲ್ಲಿ, ಮಂಗಲ್ ಪಾಂಡೆಯನ್ನು ಬ್ಯಾರಕ್ಪೋರ್ ಗ್ಯಾರಿಸನ್ಗೆ ನಿಯೋಜಿಸಲಾಯಿತು. ಮಂಗಲ್ ಪಾಂಡೆ, ನಂಬಿಕೆಯಿಂದ ಧರ್ಮನಿಷ್ಠ ಹಿಂದೂ ಬ್ರಾಹ್ಮಣ, ಪರಿಸ್ಥಿತಿಯನ್ನು ತಿಳಿದ ನಂತರ ಕೋಪಗೊಂಡರು ಮತ್ತು ಬ್ರಿಟಿಷರಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ನಿರ್ಧರಿಸಿದರು.

ಮಂಗಲ್ ಪಾಂಡೆ ಹೆಸರು ಇತಿಹಾಸದಲ್ಲಿ ಅಜರಾಮರವಾಗುವುದಕ್ಕೆ ಸಂದರ್ಭ ಸೃಷ್ಟಿಯಾಗಿದ್ದು, 1857, ಮಾರ್ಚ್ ನಲ್ಲಿ. ಬೆಂಗಾಲ್ ನೇಟಿವ್ ಇನ್ ಫೇಂಟ್ರಿಯ 34 ನೇ ರೆಜಿಮೆಂಟ್ ನ ಸಿಪಾಯಿಯಾಗಿದ್ದ ಸಂದರ್ಭದಲ್ಲಿ ಬ್ರಿಟಿಷ್ ವಿರುದ್ಧ ಅಸಹನೆ, ತಿರಸ್ಕಾರಕ್ಕೆ ಬಿಸಿರಕ್ತಕ್ಕೆ ನೆಪವೊಂದು ಬೇಕಿತ್ತು. ಇದೇ ವಿಷಯವನ್ನಿಟ್ಟುಕೊಂಡು ಮಂಗಲ್ ಪಾಂಡೆ, 1857, ಮಾರ್ಚ್ 29 ರ ಮಧ್ಯಾಹ್ನ, ಮಂಗಲ್ ಪಾಂಡೆ ರೆಜಿಮೆಂಟ್ನ ಕಾವಲು ಕೊಠಡಿಯ ಮುಂದೆ ಪರೇಡ್ ನಡೆಯುತ್ತಿದ್ದರು.

ಬ್ರಿಟಿಷ್ ಸರ್ಕಾರ ಹೊಸದಾಗಿ ಪರಿಚಯಿಸಿದ್ದ ಎನ್ಫೀಲ್ಡ್ ಪಿ-53 ರೈಫಲ್ ಗಳ ಬುಲೆಟ್ ಕಾರ್ಟ್ರಿಜ್ ಗೆ ಹಸು ಮತ್ತು ಹಂದಿಯ ಮಾಂಸವನ್ನು ಸವರಬೇಕಿತ್ತು. ಮತ್ತು ಕಾಟ್ರಿಜ್ ನ ಹಿಂಭಾಗವನ್ನು ಕಚ್ಚಬೇಕಿತ್ತು. ಇದನ್ನು 1850 ರ ದಶಕದಲ್ಲಿ, ಬ್ರಿಟಿಷರು ಎನ್ಫೀಲ್ಡ್ ರೈಫಲ್ ಅನ್ನು ಭಾರತಕ್ಕೆ ಪರಿಚಯಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಸೇನೆಯಲ್ಲಿದ್ದ ಹಿಂದು ಮತ್ತು ಮುಸ್ಲಿಂ ಸೈನಿಕರು ಉದ್ರಿಕ್ತರಾಗಿದ್ದರು. ಏಕೆಂದರೆ ಹಸು ಹಿಂದುಗಳಿಗೆ ಪೂಜನೀಯ. ಹಂದಿ ಎಂದರೆ ಮುಸ್ಲಿಮರಿಗೆ ವರ್ಜ್ಯ. ಎರಡು ಮತಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಇಂಥ ಕೆಲಸ ಸಾಧ್ಯವಿಲ್ಲ ಎಂದು ಸಿಪಾಯಿಗಳು ವಿರೋಧಿಸಿದ್ದರು. ಬಳಸಲೇ ಬೇಕು ಎಂಬ ಆದೇಶ ಧಿಕ್ಕರಿಸಿ ದಂಗೆ ಎದ್ದರು.

ಫೋಟೋ ಕೃಪೆ : google

ಆ ದಿನ ಅವರು ಎದುರಿಸಿದ ಮೊದಲ ಯುರೋಪಿಯನ್ ರನ್ನು ಕೊಲ್ಲಲು ಲೋಡ್ ಮಾಡಿದ ರೈಫಲ್ ಅನ್ನು ಬಳಸುವುದಾಗಿ ಬೆದರಿಕೆ ಹಾಕಿದರು. ಪಾಂಡೆಯ ನಡವಳಿಕೆಯ ಬಗ್ಗೆ ತಿಳಿದ ನಂತರ, ಸಾರ್ಜೆಂಟ್-ಮೇಜರ್ ಜೇಮ್ಸ್ ಹ್ಯೂಸನ್ ಅಲ್ಲಿಗೆ ಧಾವಿಸಿದರು. ಭಾರತೀಯ ಅಧಿಕಾರಿ ಜಮೇದಾರ್ ಈಶ್ವರಿ ಪ್ರಸಾದ್ ಅವರಿಗೆ ಮಂಗಲ್ ಪಾಂಡೆಯನ್ನು ಬಂಧಿಸಲು ಆದೇಶ ನೀಡಿದಾಗ ಅದನ್ನು ಪಾಲಿಸಲು ನಿರಾಕರಿಸಿದರು, ಆಗ ಅದೇ ಸಂದರ್ಭದಲ್ಲಿ ಮಂಗಲ್ ಪಾಂಡೆ ಬ್ರಿಟಿಶ್ ಅಧಿಕಾರಿಗಳಾದ ಮೇಜರ್ ಹ್ಯೂಸನ್ ಮತ್ತು ಲೆಫ್ಟಿನಂಟ್ ಭಾಘ್ ಮೇಲೆ ಗುಂಡಿನ ದಾಳಿ ನಡೆಸಿ ಅವರಿಬ್ಬರನ್ನೂ ನೆಲಕ್ಕುರುಳಿಸಿದ್ದರು.

ಮುಂದೆ ಈ ದಂಗೆಯು ಬಹುಕಾಲ ಮುಂದುವರೆಯದೆ ನಿಂತಿದರ ಪರಿಣಾಮದಿಂದಾಗಿ ಮಂಗಲ್ ಪಾಂಡೆ ತನ್ನ ರೈಫಲ್ ನಿಂದ ತನ್ನನ್ನು ತಾನೇ ಕೊಲ್ಲಲು ಪ್ರಯತ್ನಿಸಿದನು ಅದರೆ ಸಾಯಲಿಲ್ಲ ಗಾಯಗೊಂಡನು, ಇದರ ಪರಿಣಾಮವಾಗಿ ಬಂಧನಕ್ಕೆ ಒಳಗಾದ. ಒಂದು ವಾರದೊಳಗೆ, ಮಂಗಲ್ ಪಾಂಡೆ ತಪ್ಪಿತಸ್ಥನೆಂದು ಸಾಬೀತಾಯಿತು ಮತ್ತು ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಅವನು ತನ್ನ ಸ್ವಂತ ಇಚ್ಛೆಯ ಆದೇಶದ ವಿರುದ್ಧ ಬಂಡಾಯವೆದ್ದನೆಂದು ತನ್ನ ವಿಚಾರಣೆಯ ಉದ್ದಕ್ಕೂ ಹೇಳಿಕೊಂಡನು ಮತ್ತು ಯಾವುದೇ ಇತರ ಸೈನಿಕರು ಅವನನ್ನು ಪ್ರೋತ್ಸಾಹಿಸಲಿಲ್ಲ. ಮಂಗಲ್ ಪಾಂಡೆಯನ್ನು ಬಂಧಿಸದಂತೆ ಇತರ ಸೈನಿಕರಿಗೆ ಸೂಚನೆ ನೀಡಿದ್ದರಿಂದ ಜಾಮಾದಾರ್ ಈಶ್ವರಿ ಪ್ರಸಾದ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು.

ತೀರ್ಪಿನ ಪ್ರಕಾರ, ಪ್ರಸಾದ್ ಅವರನ್ನು ಏಪ್ರಿಲ್ 21, 1857 ರಂದು ಮತ್ತು ಮಂಗಲ್ ಪಾಂಡೆಯನ್ನು ಏಪ್ರಿಲ್ 8, 1857 ರಂದು ಬ್ಯಾರಕ್ಪುರ(ಕೋಲ್ಕತ್ತ)ದಲ್ಲಿ ಗಲ್ಲಿಗೇರಿಸಲಾಯಿತು. ಆದರೆ ಪಾಂಡೆಯವರನ್ನು ಅಂದು ಗಲ್ಲಿಗೇರಿಸಲು ಬ್ಯಾರಕ್ಪುರದಲ್ಲಿ ಯಾರೊಬ್ಬರೂ ಒಪ್ಪದೆ, ಕೊನೆಗೆ ಕೋಲ್ಕತ್ತಾದಿಂದ ನಾಲ್ವರು ನೇಣುಹಾಕುವವರನ್ನು ಕರೆಯಿಸಲಾಯ್ತು , ಬ್ಯಾರಕ್ಪುರದ ಜನತೆಗೆ ಮಂಗಲ್ ಪಾಂಡೆಯ ಮೇಲಿನ ಅಭಿಮಾನ ಎಂತಹದು ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು.

ದಂಗೆಕೋರ ಸೈನಿಕನನ್ನು ಸದೆಬಡಿಯಲು ಸೈನಿಕರು ವಿಫಲರಾಗಿದ್ದಾರೆ ಎಂದು ತನಿಖೆಯ ವರದಿಯ ನಂತರ ಮೇ 6 ರಂದು, BNI ಯ ಸಂಪೂರ್ಣ 34 ನೇ ರೆಜಿಮೆಂಟ್ ಅನ್ನು “ಅವಮಾನದಿಂದ” ವಿಸರ್ಜಿಸಲಾಯಿತು. ರೆಜಿಮೆಂಟ್ ಅನ್ನು ವಿಸರ್ಜಿಸುವ ಮೊದಲು, ಸಿಪಾಯಿ ಪಾಲ್ಟು ಅವರನ್ನು ಹವಾಲ್ದಾರ್ ಆಗಿ ಏರಿಸಲಾಯಿತು ಆದರೆ ಕಂಟೋನ್ಮೆಂಟ್ ಒಳಗೆ ಹತ್ಯೆ ಮಾಡಲಾಯಿತು. ಮಂಗಲ್ ಪಾಂಡೆಯ ಬಂಡಾಯವು 1857 ರ ಕ್ರಾಂತಿಯ ಪ್ರಮುಖ ಮುನ್ನುಡಿಗಳಲ್ಲಿ ಒಂದಾಗಿದೆ.

ಫೋಟೋ ಕೃಪೆ : google

ಭಾರತ ಸರ್ಕಾರವು ಅಕ್ಟೋಬರ್ 5, 1984 ರಂದು ಅವರ ಭಾವಚಿತ್ರವನ್ನು ಹೊಂದಿರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಅವರನ್ನು ಗೌರವಿಸಿತು. ಬ್ಯಾರಕ್ಪೋರ್ನಲ್ಲಿ, ಈ ಧೀರ ಸೈನಿಕನು ಬ್ರಿಟಿಷ್ ಪಡೆಗಳ ವಿರುದ್ಧ ದಾಳಿ ಮಾಡಿ ಬಂಡಾಯವೆದ್ದ ಸ್ಥಳವನ್ನು ಗೌರವಿಸುವ ಸಲುವಾಗಿ ಶಹೀದ್ ಮಂಗಲ್ ಪಾಂಡೆ ಮಹಾ ಉದ್ಯಾನವನವನ್ನು ಅಲ್ಲಿ ನಿರ್ಮಿಸಲಾಯಿತು. ಸುರೇಂದ್ರನಾಥ್ ಬ್ಯಾನರ್ಜಿ ರಸ್ತೆಯಲ್ಲಿರುವ ಪಶ್ಚಿಮ ಪಶ್ಚಿಮ ಬಂಗಾಳದ ಬ್ಯಾರಕ್ಪೋರ್ ಕಂಟೋನ್ಮೆಂಟ್ ನಲ್ಲಿ ಕೂಡ ಈ ವೀರ ಸೈನಿಕನನ್ನು ಗೌರವಿಸುವ ಸ್ಮಾರಕವನ್ನು ನಿರ್ಮಿಸಲಾಗಿದೆ. ಸ್ವಾತಂತ್ರ್ಯ ಹೋರಾಟದ ಸಾಧ್ಯತೆಗಳನ್ನು ಪರಿಚಯಿಸಿದ, ಬ್ರಿಟೀಶ್ ಸರ್ಕಾರಕ್ಕೆ ನಡುಕ ಹುಟ್ಟಿಸಿದ ಮಂಗಲ್ ಪಾಂಡೆಯವರ ಜನ್ಮ ದಿನವನ್ನು ನನೆಯುವುದರ ಮೂಲಕ ಆ ಮಹಾ ಚೇತನ ಕ್ಕೆ ನಮಿಸೋಣ.


  • ಡಾ.ಗುರುಪ್ರಸಾದ್ ರಾವ್ ಹವಲ್ದಾರ್ – ಲೇಖಕರು ಮತ್ತು ಉಪನ್ಯಾಸಕರು

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW