ರಾಷ್ಟ್ರಕವಿ ಪ್ರೊ.ಜಿ.ಎಸ್.ಶಿವರುದ್ರಪ್ಪನವರು ನಮ್ಮನ್ನು ಅಗಲಿ ಇಂದಿಗೆ (23-12-2021) ಎಂಟು ವರ್ಷಗಳು ತುಂಬುತ್ತಿವೆ. ಅಗಲಿದ ಪ್ರೊ.ಜಿಎಸ್ಎಸ್ ಅವರ ಸ್ಮರಣಾರ್ಥ ಇಂದು ಸಂಜೆ 4:00 ಗಂಟೆಗೆ ಜಿಎಸ್ಎಸ್ ಅಂತ್ಯಕ್ರಿಯಾ ಕಟ್ಟೆಯ ಎದುರು ಕವಿ ಸ್ಮರಣೆ ದಿವಸ ಕಾರ್ಯಕ್ರಮವನ್ನು ಸಾಹಿತಿಗಳ ಗೌರವ ಕ್ರಿಯಾ ಸಮಿತಿ ವತಿಯಿಂದ ಆಯೋಜಿಸಲಾಗಿದೆ. ಮುಂದೆ ಓದಿ…
ರಾಷ್ಟ್ರಕವಿ ಪ್ರೊ.ಜಿ.ಎಸ್.ಶಿವರುದ್ರಪ್ಪನವರು ನಮ್ಮನ್ನು ಅಗಲಿ ಇಂದಿಗೆ (23-12-2021) ಎಂಟು ವರ್ಷಗಳು ತುಂಬುತ್ತಿವೆ. ಅಗಲಿದ ಪ್ರೊ.ಜಿಎಸ್ಎಸ್ ಅವರ ಸ್ಮರಣಾರ್ಥ ನಾಳೆ ಸಂಜೆ 4:00 ಗಂಟೆಗೆ ಸರಿಯಾಗಿ ಬೆಂಗಳೂರು ವಿವಿಯ ಜ್ಞಾನಭಾರತಿ ಸಮೀಪದ ಮಲ್ಲತ್ತಹಳ್ಳಿಯ ಕುವೆಂಪು ಕಲಾಗ್ರಾಮದಲ್ಲಿರುವ ಜಿಎಸ್ಎಸ್ ಅಂತ್ಯಕ್ರಿಯಾ ಕಟ್ಟೆಯ ಎದುರು ಕವಿ ಸ್ಮರಣೆ ದಿವಸ ಕಾರ್ಯಕ್ರಮವನ್ನು ಸಾಹಿತಿಗಳ ಗೌರವ ಕ್ರಿಯಾ ಸಮಿತಿ ವತಿಯಿಂದ ಆಯೋಜಿಸಲಾಗಿದೆ. ಕವಿ ಸ್ಮರಣೆ ದಿವಸ ದ ಅಂಗವಾಗಿ ಗೀತಗಾಯನ, ಕವಿಗೋಷ್ಠಿ ಹಾಗೂ ಸಾಹಿತ್ಯ ವಿಚಾರ ಮಂಡನೆ ಹಮ್ಮಿಕೊಳ್ಳಲಾಗಿದೆ.
ಸದರಿ ಕಾರ್ಯಕ್ರಮದಲ್ಲಿ ಕವಿ ಸಾಹಿತಿ ಕಲಾವಿದರು ಹಾಗೂ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮುಂತಾದವರು ಪಾಲ್ಗೊಳ್ಳಲಿದ್ದಾರೆ. ತಾವು ಕೂಡಾ ಮರೆಯದೆ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ವಿನಂತಿ.
ನಮ್ಮೊಂದಿಗೆ,
ಪುಸ್ತಕಮನೆ ಹರಿಹರಪ್ರಿಯ, ಕೆ.ಎಚ್.ಕುಮಾರ್ ರಂಗೋತ್ರಿ, ಡಾ.ವಡ್ಡಗೆರೆ ನಾಗರಾಜಯ್ಯ, ಆರ್.ಜಿ.ಹಳ್ಳಿ ನಾಗರಾಜ್, ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಡಾ.ಕೆ.ಎನ್.ನಾಗೇಶ್, ಯೋಗೇಶ್ ಮಾಸ್ಟರ್, ಎಂ.ಪ್ರಕಾಶಮೂರ್ತಿ, ಸಂತವಾಣಿ ಪಿ ಸುಧಾಕರ್, ಡಾ.ನಟರಾಜ್ ತಲಘಟ್ಟಪುರ, ನರಸಿಂಹಮೂರ್ತಿ, ಸಿರಿಮನೆ ನಾಗರಾಜ್, ಕೃಷ್ಣಮೂರ್ತಿ, ಸುನೀತಾ ರಾಮಾಚಾರಿ, ಸುಧಾಕರ್ ಸಾಸಲು, ಗುಂಡಿಗೆರೆ ವಿಶ್ವನಾಥ್, ಗೌರಮ್ಮ ಎಂ, ನಾಗೇಂದ್ರ ಎಂ.ಎನ್, ಸಿ.ಜಿ.ಹಳ್ಳಿ ಮೂರ್ತಿ, ನೇತ್ರಾವತಿ ಬಿ.ಎಸ್, ವಿಶಾಲ್ ಹಾಗೂ ನೀವು.
ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ.
- ಆಕೃತಿನ್ಯೂಸ್