‘ಮರೆಯಲಾಗದ ಮಾಣಿಕ್ಯ’ ಕವನ – ಸವಿತಾ ಮುದ್ಗಲ್

‘ಜ್ಞಾನದ ಬಾವಿಯನು ನಿತ್ಯವು ನೀ ತೋಡುತಿರು ಹೊಸನೀರಿನ ಶುಚಿಯಂತೆ ನಿನ್ನಲಿ ತುಂಬುತಿರು’…ಸವಿತಾ ಮುದ್ಗಲ್ ಅವರ ರಚನೆಯ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…

ಜೀವನ ಎಂಬುದು
ವರವಿದು ನಮಗೆ
ತಿಳಿದು ನಡೆಯುವ
ಮನವು ಬೇಕಾಗಿದೆ
ಅರಿತು ಬಾಳು,
ಸ್ವರ್ಗವು ಈ ಧರೆಯಲ್ಲಿದೆ
ಮನದ ಕಲ್ಮಶದಿ
ಇದುವೇ ನರಕವಾಗಲಿದೆ ||

ಎಲ್ಲರೂ ಶೂನ್ಯ
ಈ ಪ್ರಪಂಚದಲ್ಲಿ ಅರಿತರೆ
ಧರೆಗೆ ಮರೆಯಾಗುವರು
ನಿನ್ನ ಉಸಿರೋದರೆ
ಇಲ್ಲಿ ಮರೆಯಲಾಗದ
ಮಾಣಿಕ್ಯನಂತೆ ನೀನಾದರೆ
ಮರೆಯದೆ ಪ್ರತಿಷ್ಠಾಪಿಸಿ
ನಿತ್ಯವು ಪೂಜಿಸುವರೆ ||

ಜ್ಞಾನದ ಬಾವಿಯನು
ನಿತ್ಯವು ನೀ ತೋಡುತಿರು
ಹೊಸನೀರಿನ ಶುಚಿಯಂತೆ
ನಿನ್ನಲಿ ತುಂಬುತಿರು
ದಾಹಕೆ ಎಂದಿಗೂ
ಒರತೆಯಂತೆ ಕೊರೆಯುತಿರು
ವಿದ್ಯೆಯನು ಎಲ್ಲರಿಗೂ
ನೀಡಲು ಮರೆಯದಿರು ||

ಬಹುದಿನದ ದಾರಿಯನ್ನು
ನಡೆಸಿ ಮುಂದೋಗಬೇಕು
ನೆನೆಪುಗಳ ಬುಟ್ಟಿಯನ್ನು
ಹೊತ್ತು ಸಾಗಲೇಬೇಕು
ಕಹಿಸಿಹಿಗಳ ಸ್ವಾರಸ್ಯಕೆ
ಮಿಡಿಯುವ ಮನಸಾಗಬೇಕು
ಎಂದಿಗೂ ಕುಂದದ
ಸರಳ ವ್ಯಕ್ತಿತ್ವವೆ ನಮ್ಮದಾಗಬೇಕು ||


  • ಸವಿತಾ ಮುದ್ಗಲ್ – ಬಳ್ಳಾರಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW