ಕಲ್ಲಾಗಬೇಕಿತ್ತು…ಕಲ್ಲು ಗೊಂಬೆಯಾಗಬೇಕಿತ್ತು…ಏಕೆ?, ಕವಿಯತ್ರಿ ಡಾ. ಸರಸ್ವತಿ ಚಿಮ್ಮಲಗಿ ಅವರ ಕವನದಲ್ಲಿ, ಮುಂದೆ ಓದಿ..
ನಾನು ಕಲ್ಲಾಗಬೇಕಿತ್ತು
ಕಲ್ಲು ಗೊಂಬೆಯಾಗಬೇಕಿತ್ತು
ಇಜಿಪ್ತ ಸುಮೇರಿಯನ್ ಪಳೆಯುವಿಕೆಯಲ್ಲಿ
ನಾನೊಂದು ಗೊಂಬೆಯಾಗಿದ್ದರೆ
ವಸ್ತು ಸಂಗ್ರಹಾಲಯದಲ್ಲಿದ್ದು
ಮೆರೆಯುತ್ತಿದ್ದೆ!
ಶಿಲ್ಪಿಯ ಉಳಿಯಲ್ಲಿ
ಬೇಲೂರ ಬಾಲೆಯಾಗಿ
ಬಂದವರ ಬೆರಗುಗೊಳಿಸಿ
ಮಂತ್ರ ಮುಗ್ಧರನ್ನಾಗಿ ಮಾಡುತ್ತಿದ್ದೆ
ಆದರೆ
ಮಾನವೀಯತೆ ಇಲ್ಲದವರ ಮಧ್ಯೆ
ನಾನು ನಾನಾಗಿರುವುದಕ್ಕಿಂತ
ಕಲ್ಲಾಗಬೇಕಿತ್ತು
ಕಲ್ಲು ಗೊಂಬೆಯಾಗಬೇಕಿತ್ತು
- ಡಾ. ಸರಸ್ವತಿ ಚಿಮ್ಮಲಗಿ (ಖ್ಯಾತ ಕವಿಯತ್ರಿ, ಬರಹಗಾರ್ತಿ )ವಿಜಯಪುರ/ ಕಲಬುರಗಿ
