ನಾನು ತೋರಿದ ವಿಶ್ವಾಸ-ನಂಬಿಕೆಗೆ ಅವರು ದ್ರೋಹ ಬಗೆದರು, ಯಾರವರು …ಪ್ರೊ. ಸಿದ್ದು ಸಾವಳಸಂಗ ಅವರ ಈ ಕವನವನ್ನು ತಪ್ಪದೆ ಮುಂದೆ ಓದಿ….
ನಾನು ತೋರಿದ
ಕಾಳಜಿಗೆ ಅವರು
ಅವರು ಕಿಲುಬು ತೋರಿದರು !!
ನಾನು ತೋರಿದ
ಪ್ರೀತಿ-ಸ್ನೇಹಕ್ಕೆ
ಅವರು ಮೋಸ ಮಾಡಿದರು !!
ನಾನು ತೋರಿದ
ಸ್ನೇಹಾಭಿಮಾನಕ್ಕೆ
ಅವರು ದುರಭಿಮಾನ ತೋರಿದರು !!
ನಾನು ತೋರಿದ
ಸಹೋದರತ್ವ ಭಾವಕ್ಕೆ
ಅವರು ವಂಚನೆ ಮಾಡಿದರು !!
ನಾನು ತೋರಿದ
ಸತ್ಯ-ನ್ಯಾಯಕ್ಕೆ ಅವರು
ಅನ್ಯಾಯ ಮಾಡಿದರು !!
ನಾನು ತೋರಿದ
ವಿಶ್ವಾಸ-ನಂಬಿಕೆಗೆ
ಅವರು ದ್ರೋಹ ಬಗೆದರು !!
ನಾನು ತೋರಿದ
ತುಂಬು ಭರವಸೆಗೆ
ಅವರು ತಣ್ಣೀರೆರಚಿದರು !!
- ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಕಾವ್ಯನಾಮ – ಚಿರಂಜೀವಿ, ವಿಜಯಪುರ
