ಸತ್ಯ ಹರಿಶ್ಚಂದ್ರ ಸತ್ಯ ಮಾರ್ಗದಿ ಗೆದ್ದ ! … ಕವಿ ಪ್ರೊ.ಸಿದ್ದು ಸಾವಳಸಂಗ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಸತ್ಯದ ಹಾದಿಯಲ್ಲಿ
ನಡೆದರೆ ಸಾವಿಲ್ಲ !
ಮಿಥ್ಯದ ಮುಖವಾಡಕ್ಕೆ
ಜಗದಲ್ಲಿ ಬೆಲೆಯಿಲ್ಲ !!
ಸತ್ಯದ ಹಾದಿ
ಪಯಣಿಗನಿಗೆ ಬಲು ಕಠಿಣ !
ಮಿಥ್ಯದ ದಾರಿ ಹಾದಿ
ಹೋಗುವವನಿಗೆ ಅತಿ ಸುಲಭ !!
ಸತ್ಯ ಹರಿಶ್ಚಂದ್ರ
ಸತ್ಯ ಮಾರ್ಗದಿ ಗೆದ್ದ !
ದುರ್ಯೋಧನ
ಮಿಥ್ಯ ಮಾರ್ಗದಿ ಬಿದ್ದ !!
ಸತ್ಯದಿ ನಡೆದರೆ
ಕೊನೆಗೆ ನಿಶ್ಚಿತ ಗೆಲುವು !
ಮಿಥ್ಯದಿ ಹೋದರೆ
ಕೊನೆಯಲ್ಲಿ ಖಚಿತ ಸೋಲು !!
ಸತ್ಯವಂತರು ಈ
ಜಗದಲ್ಲಿ ಕಡಿಮೆ !
ಮಿಥ್ಯನುಡಿಯುವವರು
ಜಗದಲ್ಲಿ ಅಧಿಕ !!
ಸತ್ಯವು ಬೂದಿ
ಮುಚ್ಚಿದ ಕೆಂಡ !
ಹೊರಗೆ ಬಂದಾಗ
ಬಟಾಬಯಲಾಗುವುದು ಭಂಡ !!
ಸತ್ಯ-ಸುಳ್ಳಿಗೆ ಬಿಡದೆ
ಸತತ ನಡೆದಿದೆ ಹೋರಾಟ !
ಕೊನೆಯಲ್ಲಿ ಸತ್ಯಗೆದ್ದು
ಸುಳ್ಳು ಗಾಳಿಯಲಿ ಹಾರಾಟ !!
- ಪ್ರೊ. ಸಿದ್ದು ಸಾವಳಸಂಗ, ವಿಜಯಪುರ (ಕಾವ್ಯನಾಮ – ಚಿರಂಜೀವಿ)
