ಮನುಷ್ಯನಿಗೆ ಭಗವಂತ ಬದುಕಲ್ಲಿ ಕೊಟ್ಟ ಅಮೂಲ್ಯ ದ್ರವ್ಯವೆಂದರೆ ಈ ಭಾವನೆಗಳು. ಇನ್ನೊಬ್ಬರ ಭಾವನೆಗಳಿಗೆ ಸ್ಪಂದಿಸುವ ರತನ ಟಾಟಾ ಅವರು ಶ್ರೇಷ್ಠ ವ್ಯಕ್ತಿಗಳಲ್ಲಿ ಅವರು ಕೂಡಾ ಒಬ್ಬರು. ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೊಂದು ಸ್ಫೂರ್ತಿ ನೀಡುವ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಓದಿ…
ಭಾರತದ ಹೆಮ್ಮೆಯ ಬೃಹತ್ ಉದ್ಯಮಿ ಶ್ರೀ ರತನ್ ಟಾಟಾ ರವರ ತಂದೆ ಮತ್ತು ತಾಯಿ ಇಬ್ಬರೂ ಕ್ಯಾನ್ಸರ್ ನಿಂದ ಬಳಲಿ ತೀರಿ ಹೋಗುತ್ತಾರೆ. ಆ ನೋವನ್ನು ಅರಿತ ರತನ್ ಟಾಟಾ ರವರು ಅನೇಕ ರಾಜ್ಯಗಳಲ್ಲಿ ರಾಜ್ಯ ಸರ್ಕಾರಗಳ ಜೊತೆ ಜಂಟಿಯಾಗಿ ಕ್ಯಾನ್ಸರ್ ಹಾಸ್ಪಿಟಲ್ ಗಳನ್ನು ತೆಗೆಯಲು ಕೈ ಜೋಡಿಸಿದ್ದಾರೆ.
“I dedicate my last years to health” (ನನ್ನ ಕೊನೆಯ ದಿನಗಳನ್ನು ಆರೋಗ್ಯಕ್ಕೆ ಸಮರ್ಪಸಿಕೊಳ್ಳುತ್ತೇನೆ) ಎನ್ನುವ ರತನ್ ಭಾರತ ಕಂಡ ರತ್ನವಲ್ಲದೆ ಮತ್ತೇನು! ಅದೇ ರತನ್ ಟಾಟಾ ರವರು ಒಮ್ಮೆ ಬೆಂಗಳೂರು ರಸ್ತೆಯಲ್ಲಿ ಕಾರಿನಲ್ಲಿ ಚಲಿಸುವಾಗ ಇವರ ವಾಹನದ ಮುಂದೆ ಒಂದು ಮಧ್ಯಮ ವರ್ಗದ ಕುಟುಂಬ ಅಂದರೆ ಗಂಡ, ಹೆಂಡತಿ ಮತ್ತು ಒಂದು ಮಗು ಬೈಕಿನಲ್ಲಿ ಚಲಿಸುತ್ತಾ ರಸ್ತೆಯಲ್ಲಿ ಅಪಘಾತವಾಗಿ ಕೆಳಗೆ ಉರಳುತ್ತಾರೆ. ಭಯಂಕರ ರಕ್ತ ಸ್ರಾವವಾಗುತ್ತದೆ.

ಇದನ್ನು ಕಣ್ಣಾರೆ ಕಂಡ ರತನ್ ಟಾಟಾ ರವರು ಈ ಮಧ್ಯಮ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಕಾರೊಂದನ್ನು ಕೊಡುವ ಮಹತ್ವಾಕಾಂಕ್ಷೆಯನ್ನು ಹೊಂದಿ ‘ಟಾಟಾ ನ್ಯಾನೊ ಕಾರ್’ ನ್ನು ಹೊರ ತರುತ್ತಾರೆ. ಇದೆಲ್ಲ ನಮಗೆ ಗೊತ್ತಿರುವ ಇತಿಹಾಸ. ಬದುಕಲ್ಲಿ ನಾನು ನೋವನ್ನೇ ಉಂಡಿದ್ದೇನೆ ಎಂದು ಇತರರಿಗೆ ನೋವನ್ನು ಉಂಟು ಮಾಡುವ ಅನೇಕ ನಕಾರಾತ್ಮಕರಿಗೆ ರತನ್ ಟಾಟಾ ರವರು ಒಂದು ಸಕಾರಾತ್ಮಕ ಉತ್ತರವಾಗಿ ನಿಲ್ಲುತ್ತಾರೆ.
ಇನ್ನೊಬ್ಬರ ನೋವನ್ನು ಕಣ್ಣಾರೆ ಕಂಡ ಮೇಲೆ ಅದಕ್ಕೆ ಕಣ್ಣಿರೊರೆಸುವ ಸಕಾರಾತ್ಮಕ ಪರಿಹಾರವಾಗಿ ನಿಲ್ಲುವ ಯೋಚನೆ ಟಾಟಾ ರಂತಹ ಶ್ರೇಷ್ಠ ಆತ್ಮಗಳಿಗೆ ಮಾತ್ರ ಸಾಧ್ಯವಾಗುತ್ತದೆ.
ಒಲವಿನ ಮಾತು:
******
ಮನುಷ್ಯನಿಗೆ ಭಗವಂತ ಬದುಕಲ್ಲಿ ಕೊಟ್ಟ ಅಮೂರ್ತ, ಅಮೂಲ್ಯ ದ್ರವ್ಯವೆಂದರೆ ಈ ಭಾವನೆಗಳು. ಹೀಗಾಗಿ ಈ ಬದುಕಲ್ಲಿ ಇನ್ನೊಬ್ಬರ ನೋವನ್ನು ನೀಗಿಸುವ ಚಿಂತನಾರ್ಹ ಭಾವದೊಲವನ್ನು ಹೊಂದಿ ಮನುಷ್ಯರಾಗೋಣ. ಅಲ್ವಾ!

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಹೀಯಾಳಿಸದಿರು ಮನವೆ!!
- ‘ಸಾವು ಬದುಕಲು ಕಲಿಸುತ್ತದೆ’
- ಪ್ರೇಮ ಭಕ್ತಿಯಾಗುವುದು ಯಾವಾಗ !
- ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ…
- ಬರಿ ವಿಶ್ವಾಸ Vs ಸಂಪೂರ್ಣ ಭರವಸೆ
- ಋಣಾನುಬಂಧ
- ಕಷ್ಟದಲ್ಲಿಯೂ ಇಷ್ಟದ ಬದುಕು
- ರತನ್ ಮತ್ತು ಟೀಟು
- ನಿಗರ್ವಿ ಹನುಮ
- ಎಂದೆಂದೂ ಮರೆಯದ ವ್ಯಕ್ತಿತ್ವ ಡಾ.ಅಬ್ದುಲ್ ಕಲಾಮ್
- ಡಾ. ರಾಜಶೇಖರ ನಾಗೂರ
