‘ವರ್ಷಾಘಾತ’ ಕವನ – ಅನಂತ ನಾಯಕ

ಕವಿ ಅನಂತ ನಾಯಕ ಅವರ ಲೇಖನಿಯಲ್ಲಿ ಅರಳಿದ ‘ವರ್ಷಾಘಾತ’ ಕವನವನ್ನು ತಪ್ಪದೆ ಓದಿ…

ಬೆಚ್ಚನೆ ಬಿಸಿಲಿಗೆ ಬಿಚ್ಚುತ ರೆಕ್ಕೆಯ
ಗುಚ್ಚದಿ ಕುಳಿತಿರೆ ವಿಹಗಗಳು |
ಕಪ್ಪನೆ ಜಲಧರ ಹನಿಗಳ ಹನಿಸಲು
ಕ್ಷಿತಿಯಲಿ ವರ್ಷದ ಧಾರೆಗಳು ||1||

ತಂಪಿನ ಎಲರಿಗೆ ಕಲರವ ಬಾರದೆ
ಗಡಗಡ ನಡುಗಿದ ಹಕ್ಕಿಗಳು |
ಹರವಿನ ಎಲೆಗಳು ಭರ ಭರ ಬೀಸಲು
ಗಾಳಿಗೆ ಚದುರಿದ ಗೂಡುಗಳು ||2||

ವರುಣನ ಅವಕೃಪೆ ಕಾರಣ ಅರಿಯದ
ದಾರುಣ ಜಗಲಿಗೆ ಜೀವಿಗಳು |
ದಾಳಿಗೆ ನಲುಗಿದ ಒಟ್ಟಲು ಮರಿಗಳ
ಅದುರಿದ ಕೆಂಪನೆ ಅಧರಗಳು ||3||

ಮೂಡಣ ದಿಸೆಯಲಿ ಆರುಣನ ಕಾಣಲು
ಹಸಿರಲಿ ಅರಳಿದ ಮಲರುಗಳು |
ಧರಣಿಯ ಕಾವಲು ನಿರುತವು ಕಾಪುದೆ
ತರಣಿಯ ದಿನಚರಿ ಕರಣಗಳು ||4||


  • ಅನಂತ ನಾಯಕ – ಲೇಖಕರು, ಸಾಹಿತಿಗಳು, 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW