‘ಅಮ್ಮ ಮಗ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ



‘ಏಳು ಬೀಳು ನೀನೆ ಉಂಡು ತುಪ್ಪದನ್ನ ಉಣಿಸಿದೆ’…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಸಾಲುಗಳಿವು, ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ಜನ್ಮದಾತೆ ಅನ್ನದಾತೆ
ಪೊರೆದ ನನ್ನ ಮಾತೆಯೆ
ಹಾಲನುಣಿಸಿ ಬೆಳಕನಿಳಿಸಿ
ಬೆಳೆಸಿದಂತ ತಾಯಿಯೆ

ನಡೆಯುವಾಗ ಬೀಳದಂತೆ
ಕೈಯ ಹಿಡಿದು ನಡೆಸಿದೆ
ನುಡಿಯುವಾಗ ತೊದಲದಂತೆ
ಮೊದಲ ಮಾತು ಕಲಿಸಿದೆ

ಏಳು ಬೀಳು ನೀನೆ ಉಂಡು
ತುಪ್ಪದನ್ನ ಉಣಿಸಿದೆ
ಕೇಳದೇನೆ ಕೂಳು ಕೊಟ್ಟು
ನನ್ನ ನೀನು ಬೆಳೆಸಿದೆ

ಹಟವ ಮಾಡುತಿರಲು ನಾನು
ಮುದ್ದು ಮಾಡಿ ಕರೆಯುವೆ
ಕೆನ್ನೆ ಸವರಿ ಅಳುವ ಮರೆಸಿ
ಪ್ರೀತಿಯಿಂದ ಬಳಸುವೆ

ಕ್ಷಣವು ನಾನು ಕಾಣದಿರಲು
ದುಃಖದಲ್ಲಿ ಮಿಡಿಯುವೆ
ಕಣವು ನೀನೆ ನನ್ನ ಒಳಗು
‌ದುಡಿದು ನಿನ್ನ ಸಾಕುವೆ

ಮುಪ್ಪು ನಿನಗೆ ಬಂದರೂನು
ಅಪ್ಪಿ ನಿನ್ನ ಸಲಹುವೆ
ಕಣ್ಣ ರೆಪ್ಪೆ ಬಳಸುವಂತೆ
ಸೇವೆಯಲ್ಲಿ ಬೆರೆಯುವೆ.


  • ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು), ಬೆಂಗಳೂರು

0 0 votes
Article Rating

Leave a Reply

1 Comment
Inline Feedbacks
View all comments
ಚನ್ನಕೇಶವ ಜಿ ಲಾಳನಕಟ್ಟೆ

ಅಡ್ಮಿನ್ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW