ಸಾವಿರ ಕನಸು ಕಾಣುವ ಹೊತ್ತಲಿ…ನೀರಿನ ಸೆಲೆಯು … ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಸುಂದರ ಕವನ ಓದುಗರಿಗಾಗಿ, ಮುಂದೆ ಓದಿ….
ಸೀರೆಯ ಸೆರಗಲಿ ಕಣ್ಣೀರ ಧಾರೆಯು
ಹೆಣ್ಣಿನ ಬಾಳಿಗೆ ಶಾಪವು
ಕೋಡಿಯಾಗಿಹುದು ನೋವಿನ ನೆತ್ತರು
ಕನಸಲು ಕಾಣುವ ಕೂಪವು
ಹೆಣ್ಣಿನಾಳದಲಿ ಭಾವದೋಕುಳಿಯು
ದುಃಖದ ಬೀಜವ ಬಿತ್ತಿದೆ
ಮೇಕೆಯ ಬಾಯಿಗೆ ಚಿಗುರಲೆ ಸಿಕ್ಕರೆ
ಬೆಳೆಯುವ ಮುನ್ನವೆ ಬತ್ತಿದೆ
ಆಸೆಯ ಪರಿದಿಯು ಕಾಣದೆ ಸೊರಗುತ
ನೋವಿನ ಆಳದಿ ಹುದುಗಿದೆ
ಕಾಣದೆ ಕಂಡವು ಅಬಲೆಯ ಬಾಳಲಿ
ಶಪಿಸುತ ಮನವನೆ ಕದಡಿದೆ
ಸಾವಿರ ಕನಸು ಕಾಣುವ ಹೊತ್ತಲಿ
ನೀರಿನ ಸೆಲೆಯು ಉಕ್ಕಲಿ
ಜನುಮವ ನೀಡುವ ಪ್ರಕೃತಿ ಮಾತೆಯು
ಹಸಿರನು ಉಸಿರಲಿ ತುಂಬಲಿ.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
