ಮೂರು ನೂರು ವರ್ಷಗಳ ಹಿಂದೆ “ಗಂಡಿ ಸಹೋದರರು” ನಿರ್ಮಿಸಿದರು ಎನ್ನಲಾಗುವ ಕುದುರೆ ಲಾಳಾಕಾರದ ಈ ಮೆಟ್ಟಿಲು ಬಾವಿ ಇರುವುದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಚಂದ್ರಶೇಖರಪುರಂ ಮಂಡಲ ಪಂಚಾಯ್ತಿ. ವಸಂತ ಗಣೇಶ್ ಅವರು ಕುದುರೆ ಲಾಳಾಕಾರದ ಮೆಟ್ಟಿಲು ಬಾವಿಯ ವಿಶೇಷತೆಯ ಬಗ್ಗೆ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಮೈಲ್ಲೂಚರ್ಲ್ಲ ಎನ್ನುವ ಹಳ್ಳಿಯಲ್ಲಿ. ಫ್ಲೋರೈಡ್ ಪೀಡಿತ ಪ್ರದೇಶವಾಗಿರುವ ಈ ಹಳ್ಳಿಯಲ್ಲಿ ಇಂದಿಗೂ ಕುಡಿಯುವ ನೀರಿನ ಏಕೈಕ ಮೂಲವಾಗಿದೆ. ಹಿಂದೆ ನೀರು ತುಂಬಿರುತ್ತಿದ್ದ ಈ ಬಾವಿಯಲ್ಲಿ ಈಗ ನೀರು ಆಳಕ್ಕೆ ಇಳಿದಿದೆಯಾದರೂ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಈ ಬಾವಿಯನ್ನೇ ಆಶ್ರಯಿಸಿದ್ದಾರೆ.
ನೋಡಲು ಕುದುರೆ ಲಾಳಾಕಾರವಾಗಿರುವ ಈ ಬಾವಿಗೆ ಒಂದು ಕಡೆಯಿಂದ ಇಳಿಯಲು ಮೆಟ್ಟಿಲುಗಳು ಇವೆ. ಉಳಿದಂತೆ ವೃತ್ತಾಕಾರವಾಗಿರುವ ಬಾವಿಯ ಸುತ್ತಲೂ ಕುಳಿತು ಕೊಳ್ಳಲು ಓಡಾಡಲು ಅನುಕೂಲವಾಗುವಂತೆ ಜಗುಲಿಯ ರೀತಿಯಲ್ಲಿ ನಿರ್ಮಿಸಲಾಗಿದೆ. ನೋಡಲು ಮನ ಮೋಹಕವಾಗಿ ಕಾಣುವ ಈ ಬಾವಿ ಇಂದಿಗೂ ಅಲ್ಲಿನ ಜನರಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ.
- ವಸಂತ ಗಣೇಶ್