ಇದೆಂಥ ಘೋರ ಬರ…! ಕವನ – ಪ್ರೊ. ಸಿದ್ದು ಸಾವಳಸಂಗ

‘ಕೆರೆಕಟ್ಟೆಗಳು ಒಣಗಿ ಎಲ್ಲೆಂದರಲ್ಲಿ ಬಣಬಣ… ಹಸಿರೇಯಿಲ್ಲದೆ ವಸುಂಧರೆ ಬೀಸಿದ ಬಿಸಿಗಾಳಿಗೆ ಜನ ತತ್ತರ !’…ಪ್ರೊ. ಸಿದ್ದು ಸಾವಳಸಂಗ, ಲೇಖನಿಯಲ್ಲಿ ಬರಗಾಲದ ಚಿತ್ರಣವನ್ನು ತಪ್ಪದೆ ಮುಂದೆ ಓದಿ…

ಇದೆಂಥ ಘೋರ ಬರ
ಜನಮನ ಮರಮರ !
ತುತ್ತು ಅನ್ನಕ್ಕೂ ತತ್ವಾರ
ಕುಡಿವ ನೀರಿಲ್ಲದೆ ಹಾಹಾಕಾರ !

ಖಗ ಮೃಗಗಳಿಂದ ಹರಿಯಿತು ಮೂಕ ಕಣ್ಣೀರ
ದೇವ-ಮಹಾದೇವನೂ ನೀಡಲಿಲ್ಲ ವರ !
ಬದುಕುಳಿಯುವ ಮಾತು ದೂರ ದೂರ
ಎಲ್ಲೆಡೆ ಮೌನವೇ ನಮಗಾಧಾರ !

ಮನುಜನ ಜೀವಕ್ಕಿಲ್ಲ ಯಾವುದೇ ಆಸರ
ಹೀಗಾಗಿ ಎಲ್ಲೆಡೆ ತುಂಬಿದೆ ಬೇಸರ !
ನಾವು ಮಾಡಿದ ಪಾಪಕ್ಕಿಲ್ಲ ಪರಿಹಾರ
ಕೇಳಲಿಲ್ಲ ಗಿಡಮರಗಳ ಮೂಕರೋಧನ !

ಕೆರೆಕಟ್ಟೆಗಳು ಒಣಗಿ ಎಲ್ಲೆಂದರಲ್ಲಿ ಬಣಬಣ
ಹಸಿರೇಯಿಲ್ಲದೆ ವಸುಂಧರೆ ಬೀಸಿದ
ಬಿಸಿಗಾಳಿಗೆ ಜನ ತತ್ತರ !
ಸತ್ತೇ ಹೋಯಿತು ಮನುಜಕುಲ ಹೌಹಾರಿ
ತಲೆಯೆತ್ತಿ ನೋಡುತ್ತಿದ್ದಾರೆ ಜನರೆಲ್ಲ ಆಗಸ !
ಮೋಡವೇನಾದರೂ ಕಟ್ಟಿದೆಯಾ ನೇಸರನ ಪಕ್ಕ !
ಒಳ್ಳೆಯ ಕಾಲವು ಹೋಯಿತು ನಮ್ಮಿಂದ ದೂರದೂರ !
ದಿನನಿತ್ಯ ನರಕ ದರ್ಶನದ ನೋಟ ಚಿತ್ರವಿಚಿತ್ರ
ಸದ್ದಿಲ್ಲದೆ ಯಮಕಿಂಕರ ಹಾಕುತ್ತಿದ್ದಾನೆ ಮನುಜನ ಕೊರಳಿಗೆ ಹಗ್ಗ !
ನರಮನುಜನ ಜೀವನ ಆಯಿತೇ ಇಷ್ಟೊಂದು ಅಗ್ಗ !!


  • ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ವಿಜಯಪುರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW