ಕವಿ ಹೆಚ್.ಪಿ.ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಅರಳಿದ ಹನಿಗವನವನ್ನು ತಪ್ಪದೆ ಮುಂದೆ ಓದಿ…
ಈ ಸರಿ ರಾತ್ರಿಯಲಿ ನಮ್ಮ ಹೊರತು
ಯಾರಿಲ್ಲ ಬಾ
ಎಂದು ಕರೆಯದಿರು ನಲ್ಲ
ನನಗೆ ನಿನ್ನ ಮೇಲೆ ನಂಬಿಕೆ ಇಲ್ಲ
ಅಂತಲ್ಲ
ನಮ್ಮ ಶೃಂಗಾರದಾಟವನು
ಕವಿತೆಯಲಿ ಬಟಾಬಯಲು ಮಾಡುವ
ಚಟ ಹೊತ್ತ ನಿನ್ನೊಳಗಿನ
ಕವಿಯ ಭಯ!
****
ಕಾರ್ಮೋಡದಲ್ಲಡಗಿದ
ತಣ್ಣನೆ ಹನಿಗಳೂ
ನಿನ್ನೆದೆಯ ಮೃದು ಮಧುರ
ಶೀತಲ ಭಾವಗಳೂ
ಒಂದೇ ತಂಪು ತಂಪು
ಹನಿಸಿಬಿಡು ನಲ್ಲೆ
ನನ್ನೆದೆ ಬಯಲಲಿ
ಮೊಳೆತು ಅರಳಲಿ
ಅಗಣಿತ ಭಾವಗೀತೆಗಳ ಮೊಲ್ಲೆ!!
****
ವೃಥಾ
ಸೋರಿಕೆಯಾಗುತಿದೆಯಲ್ಲೇ ಹುಡುಗಿ
ನಿನ್ನ ಮಾದಕ ಕಂಗಳಿಂದ
ಎಷ್ಟೊಂದು
ಶೃಂಗಾರ ಕಾವ್ಯಗಳು!!
ಕ್ರಿಯಾತ್ಮಕವಾಗಿ
ಏಕೆ ಬರೆಯಬಾರದು ಒಮ್ಮೆ
ನಿನ್ನ ತುಟಿ ಲೇಖನಿಯಿಂದ
ನನ್ನ ತನು ಪುಟದ ಮೇಲೆ!?
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
