ಅಶೋಕ ಕುಮಾರ್ ವೈ ಜಿ ಅವರ ಲೇಖನಿಯಲ್ಲಿ ಅರಳಿದ ನೆನಪಿನ ಪಯಣ. ತಪ್ಪದೆ ಮುಂದೆ ಓದಿ…
ಏಕವಾಗಿರು
ಮನಸೇ
ಸಂಗೀತದ
ಶೃತಿಯಂತೆ
ಏಕಾಂತದಲಿ ಏರುಧ್ವನಿಯಾಗದಿರು
ಹೇಗೆ ಅರಿಯಲಿ ನಿನ್ನ
ಸ್ವರಗಳ ಆರೋಹಣ ಅವರೋಹಣಗಳ
ಏರಿಳಿತ
ಗೀತೆಗೆ
ಸಂಗಾತಿಗಳಾಗುತ್ತಿಲ್ಲ
ಯಾವ ಸಂಗ್ತಿಗಳು
ನಿಲ್ಲುತ್ತಿಲ್ಲ
ಸ್ವಸ್ಥಾನದಲಿ
ತಿಳಿಯದಾಗಿದೆ
ಅದರ ಗತಿ
ಭಾವಗೀತೆಯನ್ನೇಕೆ
ಚಿಮ್ಮಿಸುವೆ
ಸಂಭಾವನೆಯಿಲ್ಲದ ಸಮಯದಲಿ
ಇದೇ ರಾಗವನೆ
ಹೊಮ್ಮಿಸುತಿರು
ಮಧ್ಯಮದಲೆ
ಸ್ವಲ್ಪ ಕಾಲ
ಮೇಲಕ್ಕೇರದಿರು
ಹೊಸ ರಾಗವ ನುಡಿಸಲು
ಅಪಸ್ವರವಾದೀತು
- ಅಶೋಕ ಕುಮಾರ್ ವೈ ಜಿ
