“ಇದು ಪ್ರತಿ ಜೀವದ ಸತ್ಯ ಕವಿತೆ. ಪ್ರತಿ ಬದುಕಿನ ನಿತ್ಯ ಭಾವಗೀತೆ. ಪ್ರತಿ ಎದೆಗೂ ಬೆಳಕ ನೀವ ದಿವ್ಯಪ್ರಣತೆ. ಇಲ್ಲಿ ನಮ್ಮ ನಡೆಗಳಿಗೆ ನಾವೇ ಮಾರ್ಗದರ್ಶಿ. ಕನಸುಗಳಿಗೇ ನಮಗೆ ನಾವೇ ರೂಪದರ್ಶಿ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಜಡವಾದರೆ ಕಲ್ಲು
ಮಿಡಿಯುತಿದ್ದರೆ ಕಲ್ಪ
ಕೆತ್ತಿದರಷ್ಟ್ತೇ ಶಿಲ್ಪ
ಹಾಗೆ ಬಿಟ್ಟರೆ ಶಿಲೆ.!
ಶಿಲೆಯಾಗುವೆಯೋ?
ಶಿಲ್ಪವಾಗುವೆಯೋ?
ಕಲ್ಲಾಗುವೆಯೋ?
ಕಲ್ಪವಾಗುವೆಯೋ?
ಜೀವವಾಗುವೆಯೋ?
ಶವವಾಗುವೆಯೋ?
ಇಲ್ಲಿ ನಿನ್ನದೇ ಆಯ್ಕೆ
ನಿನ್ನದೇ ತೀರ್ಮಾನ.!
ಇಲ್ಲಿ ಎಂದಿಗೂ ನಿನಗೆ
ನೀನೇ ಯಜಮಾನ.!
- ಎ.ಎನ್.ರಮೇಶ್.ಗುಬ್ಬಿ – ಲೇಖಕರು, ಕವಿಗಳು, ಕೈಗಾ
