ಹೆಚ್. ಪಿ. ಕೃಷ್ಣ ಮೂರ್ತಿ ಅವರ ನಾಲ್ಕು ಹನಿಗವಿತೆಗಳನ್ನು ತಪ್ಪದೆ ಮುಂದೆ ಓದಿ…
ಕೊಡ ಹಿಡಿದು ತಾಸು ಗಟ್ಟಲೆ
ನಲ್ಲಿಯ ಮುಂದೆ ನಿಂತಳು
ನೀರೆ
ಕರುಣೆ ತೋರದ ನಲ್ಲಿ
ಒಂದು ಹನಿಯೂ ಸುರಿಸಲಿಲ್ಲ
ನೀರೇ
***
ವರುಷ ನಲವತ್ತು ದಾಟಿದರೂ
ಮದುವೆಯಾಗಲು ರೈತನಿಗೆ
ಸಿಗಲಿಲ್ಲ ನೀರೆ
ನೊಂದು ಆತ್ಮಹತ್ಯೆಗೆಂದು
ಕೆರೆಗೆ ಹಾರಲು ಬಂದ
ಇರಲಿಲ್ಲ ಅಲ್ಲಿ ನೀರೇ!
***
ಬೇಸಿಗೆಯಲಿ ಬಾಯಾರಿದಾಗ
ನಮ್ಮ ದಾಹ ತೀರಿಸುವುದು
ನೀರೇ
ಚಳಿಗಾಲದಲ್ಲಿ ಚಳಿಯಾದಾಗ
ನಮ್ಮ ಮೈ ಬೆಚ್ಚಗೆ ಮಾಡುವವಳು
ನೀರೆ!
***
ಅವನು ಬಾರಲ್ಲಿ ಕುಡಿಯುವಾಗ
ಮದ್ಯಕ್ಕೆ ಬೆರಿಸಿಕೊಳ್ಳುವುದು
ನೀರೇ
ತೂರಾಡಿ ಮನೆಗೆ ಬಂದಾಗ
ಅವನಿಗೆ ಬೆಂಡೆತ್ತುವವಳು
ನೀರೆ!
- ಹೆಚ್. ಪಿ. ಕೃಷ್ಣ ಮೂರ್ತಿ
