‘ನೀನೂ ಬದಲಾಗು !!’ ಕವನ – ಶರಣಗೌಡ ಬಿ.ಪಾಟೀಲ

ಶರಣಗೌಡ ಬಿ.ಪಾಟೀಲ ತಿಳಗೂಳ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ನಾನು ಪ್ರತಿ ವರ್ಷ
ಬದಲಾಗುತ್ತೇನೆ
ಎಲೆ ಚಿಗುರಿಸಿ
ಹೂ ಹಣ್ಣು
ಕಾಯಿ ಬಿಟ್ಟು !

ಹಳೆ ಪೊರೆಯ,
ಕಳಚಿ ಹೊಸತನವ
ಪಡೆದು
ಬಳಿ ಬಂದವರಿಗೆ
ಯಾರೆಂದು ಕೇಳದೆ
ಆಶ್ರಯ ನೀಡುವೆ !!

ಪ್ರತಿ ದಿನ ಪ್ರತಿ ಕ್ಷಣ ಕಹಿ
ಅನುಭವಿಸಿದರು
ಎಲ್ಲವೂ ಸಹಿಸಿಕೊಂಡು
ಮರೆತು ಬಿಡುವೆ !!

ಬರೀ ನಾನು ಬದಲಾದರೆ
ಸಾಲದು ನೀನೂ
ಬದಲಾಗು, ಬದಲಾವಣೆ
ಜಗದ ನಿಯಮ !

ಕರ ಮುಗಿದು ಶಿರ ಬಾಗಿ
ಬೇಡಿಕೊಳ್ಳುವೆ ಓ ಮನುಜ
ನನ್ನಂತೆ ನೀನೂ ಬದಲಾಗು!


  • ಶರಣಗೌಡ ಬಿ.ಪಾಟೀಲ ತಿಳಗೂಳ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading