ಹಿರಿಯ ಕವಿ ಡಾ.ಲಕ್ಷ್ಮಣ ಕೌಂಟೆ ಅವರ ಲೇಖನಿಯಲ್ಲಿ ಪ್ರೀತಿಯ ಹಸಿವು, ಮುಂದೆ ಓದಿ…
ಪ್ರವಹಿಸಿ ಬಿಡು
ಒಲವಿನ ಧಾರೆ
ಒಮ್ಮೆ ಭೋರ್ಗರೆದು ಬಿಡಲಿ..
ಮನದೊಳಗಿರುವ
ಚಿಲ್ಲರೆ ಭಾವಗಳೆಲ್ಲ
ಕೊಚ್ಚಿಕೊಂಡು ಹೋಗಿ
ಅಲ್ಲಿ ತುಂಬಿಯೇ ಬಿಡಲಿ
ಪ್ರೇಮಾಮೃತವ..
ತೃಷೆಯಾದಾಗಲೆಲ್ಲ
ಕುಡಿತೆ ಕುಡಿತೆ
ಕುಡಿದು ಬಿಡುವಾ
ಹಸಿವು ನೀರಡಿಕೆ ಮರೆತು
ಮತ್ತಿನಲ್ಲಿ
ತೇಲಾಡುತ್ತಿರುವಾ..
ಬೇಸರವೇನಿಲ್ಲ
ಆಸರೆ ನನಗೆ
ಮದ್ಗಮಿಸುವ
ಪ್ರೀತಿ ಎನಗೆ..
- ಡಾ.ಲಕ್ಷ್ಮಣ ಕೌಂಟೆ (ಹಿರಿಯ ಲೇಖಕರು, ಕವಿ) ಕಲಬುರಗಿ.
