ಕರ್ನಾಟಕದ ಮಾಣಿಕ್ಯ ರಾಘವೇಂದ್ರ ಸೋಮಯಾಜಿ ಅವರ ಸಾಧನೆಯ ಕುರಿತು ಒಂದಷ್ಟು ವಿಷಯ. ಮುಂದೆ ಓದಿ…
ಸಮೃದ್ಧನ ಮುಂದೆ ಗುರಿಯಿತ್ತು, ಹಿಂದೆ ಗುರುವಿದ್ದರು… ಆ ಗುರುವಿನ ಹೆಸರೇ ರಾಘವೇಂದ್ರ ಸೋಮಯಾಜಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ದೇಶದ ಏಕೈಕ ice skater ಎಂದರೆ ರಾಘವೇಂದ್ರ ಸೋಮಯಾಜಿ… ಅವರ ಕೈಯಲ್ಲಿ ಸಮೃದ್ಧನಂತೆ ಸಾಕಷ್ಟು ಯುವ ಸ್ಕೆಟರ್ ಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಅವರಿಗೆ ಹೊರ ರಾಜ್ಯದಿಂದ ಸಾಕಷ್ಟು ಗೌರವ, ಪ್ರಶಸ್ತಿಗಳು ಸಂದಿವೆ. ವಿಷಾದನೀಯವೆಂದರೆ ಈವರೆಗೂ ಕರ್ನಾಟಕ ಸರ್ಕಾರದಿಂದ ಯಾವುದೇ ಗೌರವ ಪುರಸ್ಕಾರಗಳು ಅವರಿಗೆ ಸಂದಿಲ್ಲ. ರಾಘವೇಂದ್ರ ಅವರು ಮೂಲತಃ ಕರ್ನಾಟಕದ ಮೈಸೂರಿನವರು. ಕನ್ನಡದ ಮಣ್ಣಿನಲ್ಲೇ ಹುಟ್ಟಿ, ಬೆಳೆದ ಅವರು ಪ್ರತಿಭಾನ್ವಿತ ಸ್ಕೇಟರ್.
ತಮ್ಮ ೩೫ನೆಯ ವಯಸ್ಸಿನಲ್ಲೂ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಈಗಲಾದರೂ ಕರ್ನಾಟಕ ಸರ್ಕಾರ ಅವರ ಸಾಧನೆಯನ್ನು ಗುರುತಿಸಿ ಗೌರವಿಸಲಿ ಮತ್ತು ರಾಘವೇಂದ್ರ ಸೋಮಯಾಜಿ ಗರಡಿಯಲ್ಲಿ ಸಾಕಷ್ಟು ಯುವ ಸ್ಕೇಟರ್ ಪಳಗಲಿ ಎಂದು ಆಶೀಸುತ್ತೇನೆ.
(ಅಂತರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರಾಘವೇಂದ್ರ ಸೋಮಯಾಜಿ)
(ರಾಘವೇಂದ್ರ ಅವರ ಗರಡಿಯಲ್ಲಿ ಪಳಗಿದ ಅಂತರಾಷ್ಟ್ರೀಯ ಸ್ಕೇಟಿಂಗ್ ಆಟಗಾರ್ತಿ ಶಿಖಾ ಶರ್ಮಾ)
(ರಾಘವೇಂದ್ರ ಅವರ ಗರಡಿಯಲ್ಲಿ ಪಳಗಿದ ರಾಷ್ಟ್ರಮಟ್ಟದ ಸ್ಕೇಟಿಂಗ್ ಆಟಗಾರ ಸಮೃದ್ಧ ದಿನೇಶ್)
(ರಾಘವೇಂದ್ರ ಅವರ ಗರಡಿಯಲ್ಲಿ ಪಳಗಿದ ರಾಷ್ಟ್ರಮಟ್ಟದ ಸ್ಕೇಟಿಂಗ್ ಆಟಗಾರ ವೀರ್ )
(೫೬ನೆಯ ರಾಷ್ಟ್ರಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಒಂಬತ್ತು ಚಿನ್ನದ ಪದಕ ಪಡೆದ ತಮ್ಮ ಶಿಷ್ಯೆಯರೊಂದಿಗೆ ರಾಘವೇಂದ್ರ ಸೋಮಯಾಜಿ)
ರಾಘವೇಂದ್ರ ಸೋಮಯಾಜಿ ಸಾಧನೆಯ ಕುರಿತು ಇನ್ನಷ್ಟು ಮಾಹಿತಿ :
- ಶಾಲಿನಿ ಹೂಲಿ ಪ್ರದೀಪ್