‘ಸುಖಸಾರ’ ಹನಿಗವನಗಳು – ಪವಿತ್ರ ಗೀತಾ 



ನಿಂದನೆಗಳಿಗೆ ಕಿವಿ ಕೊಟ್ಟರೆ ಸಾಧಿಸಲು ಅಸಾಧ್ಯ, ಜೀವನಕ್ಕೆ ಸ್ಫೂರ್ತಿ ನೀಡುವಂತಹ ಹನಿಗವನಗಳನ್ನು ಕವಿಯತ್ರಿ ಪವಿತ್ರ ಗೀತಾ ಅವರು ಬರೆದಿದ್ದಾರೆ. ಓದಿ ಸಾಧ್ಯವಾದರೆ ಜೀವನದಲ್ಲಿ ಅಳವಡಿಸಿಕೊಳ್ಳಿ…

ಬೇರೆಯವರ ಮನ ನೋಯಿಸಿ
ಬೀಗುವುದು #ಅಹಂಕಾರ
ಅರಿತು, ಒಲಿಸಿಕೊಂಡರೆ ಸದಾಚಾರ

****

ನಿಂದನೆಗಳಿಗೆ ಕಿವಿ ಕೊಟ್ಟರೆ ಗುರಿ
ಮುಟ್ಟುವುದು ಸಾಧ್ಯವೇ ಇಲ್ಲ ,
ಕಿವುಡಾಗಿಬಿಡಿ , ಆಡಿಕೊಳ್ಳುವವರು
ಪರಚಿಕೊಳ್ಳುತ್ತಲೇ ಇರಲಿ, ನೀವು
ಗಮ್ಯದೆಡೆಗೆ ದೃಷ್ಟಿ ನೀಡಿ

****

ಅಡೆತಡೆಗಳಿಗೆ ಹಿಮ್ಮೆಟ್ಟಿದರೆ ಜೀವನ ದುಸ್ತರ
ಧೈರ್ಯದಿ ಮುನ್ನುಗ್ಗಿ ಎದುರಿಸಿದರೆ
ಬದುಕು ಸುಖಸಾರ…


  • ಪವಿತ್ರ ಗೀತಾ  ( ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಯತ್ರಿ )

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW