ತಿಳಿಯಾಕಾಶದಲ್ಲಿ ಮಿಂಚುಗಳು ಮಿಂಚಿದಾಗ

ಗುಡುಗುಗಳು, ಸಿಡಿಲುಗಳು ಬಂದಾಗ ಜೀವನದಲ್ಲಿ ನೆಮ್ಮದಿಯಿರಲಿ…ಸುಂದರ ಸಾಲುಗಳನ್ನು ಕವಿ ರಾಮಪ್ರಸಾದ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ….

ತಿಳಿಯಾಕಾಶದಲ್ಲಿ ಮಿಂಚುಗಳು ಮಿಂಚಿದಾಗ/
ನಂಬಿಕೆಯಿರಲಿ ಬದುಕಿನಲ್ಲಿ ಅಂಜಿಕೆಯಾದಾಗ
ನೀಲಿಯಾಗಸದಲ್ಲಿ ಗುಡುಗುಗಳು ಸಿಡಿದಾಗ/
ನೆಮ್ಮುಗೆಯಿರಲಿ ಜೀವನದಲ್ಲಿ ಭಯವಾದಾಗ/

ಅನುದಿನ ಜೀವಿತದಲ್ಲಿ ಆಗುವ ಕಹಿ ಘಟನೆಗಳಲ್ಲಿ/
ಹುದುಗಿರುವುದು ದೈವ ರಕ್ಷಣೆಯು ಆಕಸ್ಮಿಕಗಳಲ್ಲಿ/
ಪ್ರತಿದಿನ ಪಯಣದಲ್ಲಿ ಜರುಗುವ ಅಪಘಾತಗಳಲ್ಲಿ/
ಅಡಗಿರುವುದು ದೈವ ಸಂರಕ್ಷಣೆಯು ಸಂಭವಗಳಲ್ಲಿ/

ವಿಶ್ವಾಸವಿರಲಿ ವಿಧಿಯಲ್ಲಿ ಬರವಸೆಯಿರಲಿ ಭವಿಷ್ಯದಲ್ಲಿ /
ಆಪತ್ತುಗಳ ಪರಿಹರಿಸುವನು  ದೈವದತ್ತದಲ್ಲಿ  ಪರಮಾತ್ಮನು/
ವಿಶ್ವಾಸವಿರಲಿ ವಿಧಿಯಲ್ಲಿ ಬರವಸೆಯಿರಲಿ ಭವಿಷ್ಯದಲ್ಲಿ /
ವಿಪತ್ತುಗಳ ಬಗೆಹರಿಸುವನು ದೈವಿಕತೆಯಲ್ಲಿ ಭಗವಂತನು/


  • ರಾಮಪ್ರಸಾದ
0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW