‘ಮುಗಿಲ ಮಳೆ’ ಕವನ – ರೇಶ್ಮಾಗುಳೇದಗುಡ್ಡಾಕರ್



ಕವಿಯತ್ರಿ ರೇಶ್ಮಾಗುಳೇದಗುಡ್ಡಾಕರ್ ಅವರು ಸಾಮಾಜಿಕ ಚಿಂತಕರು ಮತ್ತು ಕವಯತ್ರಿ. ಅವರ ಬರವಣಿಗೆಯಲ್ಲಿ ಸಾಮಾಜಿಕ ಕಾಳಜಿ ಹೆಚ್ಚಾಗಿ ಕಾಣುತ್ತದೆ ಜೊತೆಗೆ ಅದು ಓದುಗರ ಮನಮುಟ್ಟುವಂತೆ ಮಾಡುತ್ತಾರೆಯೂ ಕೂಡಾ. ಅವರ ಕವನವನ್ನು ಓದುವುದೇ ಓದುಗರಿಗೆ ಒಂದು ಸಂಭ್ರಮ. ಅವರ ಮುಗಿಲ ಮಳೆ ಕವನವನ್ನು ಓದಿ. ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ಎಡೆಬಿಡದೆ ಸುರಿವ ಮಳೆ
ತಡಮಾಡದೆ ಮೋರಿ,ಗಟಾರ
ತುಂಬಿ ಹರಿಸುವೆ ಆದರೆ
ಮನವ ತೂಳೆಯದೇ ಹೋದೆ

ಆದೆಲ್ಲಿಂದ್ದಲೂ ತಂಗಾಳಿಯೊಂದಿಗೆ
ಬಂದು ಧರೆಯ ತಂಪು ಮಾಡಿ
ವರ್ಷಧಾರೆ ಎನಿಸಿಕೊಂಡೆ
ನಡೆವ ಹಾದಿಯಲ್ಲಾ ಸ್ವಚ್ಚಮಾಡಿದೆ …
ರಸ್ತೆಯ ಕಸವ ಹೊತ್ತೊಯ್ಯುವೆ ,ಆದರೆ
ನಮ್ಮ ಆಲೋಚನೆಗಳ ಶುಭ್ರಮಾಡದೆ ಬಿಡುವೆ ….

ಮರಗಳ ಬೆರುಗಳು ಭದ್ರವಾದವು
ಗಿಡಗಳು ಚಿಗುರಿ ನಗುತ
ನಿಂತವು ಕಾಲಕಾಲಕ್ಕೊ ನಡೆಯುವ
ಪ್ರಕ್ರಿಯೆ ಹೊಸತನವ ನೀಡುವದು
ಪ್ರಕೃತಿಯಲ್ಲಿ ಮಾನವನ ಬಿಟ್ಟು
ಎಲ್ಲವು ಹೊಸದಾಗಿ ಕಂಗೊಳಿಸುವವು ….!!

ಹಕ್ಕಿ ಪಿಕ್ಕಿಗಳು ಹರ್ಷದಿ ಮುಗಿಲು
ಮುಟ್ಟುವ ತವಕದಲಿ ಹಾರಿದವು
ಬಾನು ತನ್ನೊಡಲಲಿ ತುಂಬಿಕೊಂಡಿತು
ಖಗ ಸಂಕುಲವ ಮಮತೆಯ ಗೊಡಾಗಿತು
ನಮ್ಮವರ ನಾವು ದೂರಮಾಡಿ
ಯಂತ್ರಗಳೂಂದಿಗೆ ಮಾತಾಡುತಾಯಿತು

ಕನಸುಗಳು ಕನವರಿಸುತ್ತಲೆ
ನಾವುಗಳು ಭವಿಷ್ಯದ ಚಿಂತೆಯಲ್ಲಿ
ವಾಸ್ತವ ದೂಡಿದೆವು
ತೆಪೆ ಹಾಕಿದ ಸ್ವಾರ್ಥ ಸಂಗತಿಗಳ
ಮತ್ತೆ ಮತ್ತೆ ಕಾಪಿಟ್ಟು
ಸಂಭ್ರಮಿಸುವೆವು…!?

ಸವಿನುಡಿಯ ಮರೆತು
ಒಡನಾಡಿಗಳ ತೊರೆದು‌
ಒಂಪ್ಪಂದದ ಕೋಟೆಯಲಿ
ಕುದಿಯುತ್ತಲೇ ಇರುವೆವು ……
ದಿನಕ್ಕೂಂದು ಮುಖವಾಡ ಧರಿಸುತ್ತಾ……!!!!!


  • ರೇಶ್ಮಾಗುಳೇದಗುಡ್ಡಾಕರ್ (ಕವಿಯತ್ರಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading