‘ಮುತ್ತಜ್ಜಿಯ ಮಾತು’ ಕಿರುಗತೆ

ಮುತ್ತಜ್ಜಿಯ ಹೇಳಿದ ಅಂದಿನ ಮಾತು…ಈಗ ಅರ್ಥವಾಯಿತು.. ರೇಖಾ ವಿ ಕಂಪ್ಲಿ ಅವರ ಲೇಖನಿಯಲ್ಲಿ ಮೂಡಿಬಂದ ಅರ್ಥಪೂರ್ಣ ಕಿರುಗತೆಯನ್ನು ತಪ್ಪದೆ ಮುಂದೆ ಓದಿ …

ನಾನು ಪ್ರತಿ ದಿನ ಅಂಗಳದ ಕಸ ಗೂಡಿಸುವಾಗ ನನ್ನ ಮುತ್ತಜ್ಜಿ ನೆನಪು ಆಗುತ್ತಾಳೆ.

ಯಾಕೆ ಅಂತಿರಾ ಅವರು ಹೇಳೋರು ಭೂಮಿ ತಾಯಿನ ಸ್ವಚ್ಛ ಮಾಡಿದರೆ ಭೂಮಿ ತಾಯಿ ನಮಗೆ ಆಶೀರ್ವದಿಸಿ ನಮ್ಮನ್ನು ಕಾಪಾಡತ್ತಾಳೆ ಅಂತ ಹೇಳಿದರು.

ಆಗ ನಾನು ಸ್ವಲ್ಪ ತಲೆ ಹರಟೆ ಅಲ್ವಾ, ಅದಕ್ಕೆ ಹೆಂಗಜ್ಜಿ ?….ಅಂದೇ. ಅದಕ್ಕೆ ನನ್ನ ಮುತ್ತಜ್ಜಿ

”ನೋಡು ರೇಖಮ್ಮ, ನಮಗೆ ತಲೆಯಲ್ಲಿ ಹೇನು ಬಿದ್ದಾಗ ಯಾರಾದರೂ ನಮ್ಮ ತಲೆಯನ್ನು ಸ್ವಚ್ಛ ಮಾಡಿದಾಗ ನಮ್ಮ ಮನಸು ಹಗುರವಾಗುತ್ತದೆ ಅಲ್ವಾ… ಆಗ ನಾವು ಪ್ರತಿಯಾಗಿ ಮನಸ್ಸಿಂದ ಒಳ್ಳೆಯ ಕೆಲಸ ಮಾಡ್ತಿಯಾ ನೋಡವ್ವ… ನನ್ನ ತಲೆ ಈಗ ಬಹಳ ಅಂದ್ರ ಬಹಳ ಹಗುರಾಗೈತಿ… ನಿನಗೆ ಹತ್ಮಕ್ಕಳಾಗಲಿ… ಅಂತ ಹಾರೈಸ್ತಿವಿ ಅಲ್ವಾ… ಹಾಗೆ ಭೂಮಿ ತಾಯಿನ ಸ್ವಚ್ಛವಾಗಿ ಇಟ್ಕೊಂಡ್ರೆ ಭೂ ತಾಯಿ ನಮ್ಮನ್ನ ಕಾಪಾಡ್ತಾಳೆ ಮಗು”… ಎಂದರು.

ಆಗ ಚಿಕ್ಕ ವಯಸ್ಸಿರುವುರಿಂದ ಅದೇ ಸರಿ ಎಂದು ತಿಳಿದಿದ್ದೇ, ಆದರೆ ಈಗ ತಿಳಿದದ್ದು ಏನೆಂದರೆ ನಮ್ಮ ಪರಿಸರ ಸ್ವಚ್ಛವಾಗಿದ್ದರೆ ನಮ್ಮ ಆರೋಗ್ಯವು ಸರಿಯಾಗಿರುತ್ತದೆ, ಹಾಗೆ ಶರೀರಕ್ಕೆ ವ್ಯಾಯಾಮವಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯವು ಸುಸ್ಥಿಯಲ್ಲಿರುತ್ತದೆ ಮತ್ತು ದೇಹದಲ್ಲಿ ಕೊಬ್ಬಿನಾಂಶ ಬೆಳೆದು ತೂಕವು ಹೆಚ್ಚುವುದಿಲ್ಲವೆಂದು ಚೆನ್ನಾಗಿ ತಿಳಿದುಕೊಂಡೆ.


  • ರೇಖಾ ವಿ ಕಂಪ್ಲಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading