”ಆದದ್ದು ಆಯಿತು ಹೋದದ್ದು ಹೋಯಿತು…”ಧರ್ಮದ ಯುದ್ಧ ಮರೆತು ಪ್ರೀತಿಯಿಂದ ಬಾಳೋಣ, ಕವಿತೆಯ ಮೂಲಕ ಉತ್ತಮ ಸಂದೇಶವನ್ನು ಕವಿ ಖಾದರ ಅವರು ಓದುಗರಿಗೆ ನೀಡಿದ್ದಾರೆ, ಮುಂದೆ ಓದಿ…
ನಾ ಕನವರಿಸಿ ಮತ್ತೆ ಮತ್ತೆ ಕಾಯಿತಿರುವೆನು
ಮತ್ತೆ ಆ ದಿನಗಳು ಬರುವವೇನೆಂದು
ಅಂದು ಇಂದು ನಾ ಮರೆಯಲೇನು
ಬಟ್ಟೆಬರೆಗಳಲ್ಲಿ ಧರ್ಮವ ತಂದು
ಸೆರಗಾ ಕಿತ್ತೆಸದದ್ದು ನಾ ಮರೆಯಲೇನು
ತಿನ್ನುವ ಅನ್ನದಿ ಕೊಯ್ಯುವ ಕಟುಕನ
ಮಾಂಸವ ಮತಾಂತರಿಸಿದ್ದು ಮರೆಯಲೇನು
ಹೆಣವು ಬಿದ್ದು ತಾಳಿಯು ಹರಿದು ಕಣ್ಣೀರಾ
ಕೊಡಿಯಲ್ಲಿ ಧರ್ಮ ಹುಡುಕಿದ್ದು ಮರೆಯಲೇನು
ಹೋಳಿಗೆ ಸಾವಿಗೆ ಬೆರೆತು ಸಿಹಿಯಾದ
ಬಾಯಿಗೆ ವಿಷವು ತಾಟ್ಟಿದ್ದು ಮರೆಯಲೇನು
ಸಾಬನ ಕೂಗು ಗಂಟೆಯ ಸದ್ದು
ಕರ್ಕಶವಾಯಿತೆಂದದ್ದು ಮರೆಯಲೇನು
ಜಾತ್ರೆ ಉರುಸಿನ ಜೋಳಿಗೆಯಲ್ಲಿ ತುಂಬುತ್ತಿದ್ದ
ಹೊಟ್ಟೆಗೆ ಬಟ್ಟೆ ಹಾಕಿದ್ದು ಮರೆಯಲೇನು
ಓಟುಗಾಗಿ ನೋಟಿನ ಬದಲು
ನೊಣದಂತೆ ಹೆಣವು ಬಿಳಿಸಿದ್ದು ಮರೆಯಲೇನು
ಒಂದೇ ಮನೆಯ ಸೋದರಂತೆ ಇದ್ದ
ನಮ್ಮ ದಾಯದಿಗಳ ಮಾಡಿದ ಮರೆಯಲೇನು
ಆದದ್ದು ಆಯಿತು ಹೋದದ್ದು ಹೋಯಿತು
ಪ್ರೀತಿ ಹಂಚಿ ದ್ವೇಷವ ಅಳಿಸಿ ಮಾನವರಾಗಿ
ಎಲ್ಲವನ್ನ ಮರೆತುಬಿಡೋಣ
- ಖಾದರ್ ಎಕೆ (ಯುವ ಕವಿ)