ಓ ದೇವರೇ…ಕವನ – ಪ್ರೊ. ಸಿದ್ದು ಸಾವಳಸಂಗ

‘ಸಾಕಪ್ಪ ಸಾಕು ದೇವರೇ ಮಾನವ ಜನ್ಮ’…! ಪ್ರೊ. ಸಿದ್ದು ಸಾವಳಸಂಗ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ… 

ನನ್ನ ಅಳಲನ್ನು ಸ್ವಲ್ಪ ಕಿವಿಗೊಟ್ಟು ಕೇಳು
ನೀನೇ ಪರಿಹರಿಸು ನನ್ನ ಅನುದಿನದ ಗೋಳು !

ಮನೆಗೆ ಬಂದರೆ ಹೆಂಡತಿ ಮಕ್ಕಳ ಕಾಟ
ಮತ್ತೆ ನೆರೆಹೊರೆಯವರ ಹುಚ್ಚು ಕಾಟ !

ಉದ್ಯೋಗಕ್ಕೆ ಬಂದರೆ ಸಹೋದ್ಯೋಗಿಗಳ ಕಾಟ
ರಸ್ತೆಗೆ ಬಂದರೆ ತಗ್ಗು ಗುಂಡಿಗಳ ಕಾಟ
ಮೇಲಾಗಿ ಪೊಲೀಸರದು ಅತೀ ಕಾಟ !

ಮದುವೆಯ ಮುಂಜಿವೆಗಳಲ್ಲಿ ಜನರ ಕಾಟ
ಸರಕಾರಿ ಕಚೇರಿಗಳಲ್ಲಿ ಲಂಚದ ಕಾಟ !

ಬ್ಯಾಂಕುಗಳಲ್ಲಿ ಸರ್ವರ್ ಕಾಟ
ಸರಕಾರಿ ಬಸ್ಸುಗಳಲ್ಲಿ ಮಹಿಳೆಯರ ಕಾಟ !

ಬೇಸಿಗೆಯಲ್ಲಿ ವಿದ್ಯುತ್ ಕಾಟ
ನಿದ್ದೆಯಿಲ್ಲದೆ ರಾತ್ರಿಯಿಡೀ ಬರೀ ಒದ್ದಾಟ !

ಜೂನ್ ತಿಂಗಳು ಬಂದರೆ ಶಾಲೆ ಕಾಲೇಜುಗಳಲ್ಲಿ
ಮಕ್ಕಳ ಪೀಜು ತುಂಬವ ಕಾಟ !

ಕಿರಾಣಿ ಅಂಗಡಿಗಳಲ್ಲಿ ಕಲಬೆರಕೆಯ ಕಾಟ
ಸೊಪ್ಪು ತರಕಾರಿಗಳಲ್ಲಿ ಕೆಮಿಕಲ್ ಕಾಟ !

ಆಸ್ಪತ್ರೆಗಳಲ್ಲಿ ಗುಳಿಗೆ ಔಷಧೀಯ ಕಾಟ
ಮೀಡಿಯಾಗಳಲ್ಲಿ ಕೊಲೆ ಸುಲಿಗೆ ವರದಿಯ ಕಾಟ !

ಸಂಜೆಯಾದ ಮೇಲೆ ಕುಡುಕರ ಕಾಟ
ಅವರದು ಪಾಪ ಬರೀ ನರಳಾಟ !

ಮೊಬೈಲ್ ಗಳಲ್ಲಿ ಹ್ಯಾಕರ್ಸ್ ಕಾಟ
ಮೊಬೈಲ್ ಇಲ್ಲದಿದ್ದರೆ ಬದುಕೇ ಒದ್ದಾಟ !

ಹಬ್ಬಹರಿದಿನಗಳಲ್ಲಿ ಹಣ ಹೊಂದಿಸುವ ಕಾಟ
ಬಟ್ಟೆಯಯಂಗಡಿಯಲ್ಲಿ ಖರೀದಿಗಾಗಿ ಬಡಿದಾಟ !

ಮಳೆಗಾಲದಲ್ಲಿ ಕೆಮ್ಮು ನೆಗಡಿಯ ಕಾಟ
ರಾತ್ರಿಯಿಡೀ ಗುಂಯ್ ಗುಡುವ ಸೊಳ್ಳೆಗಳದೇ ಆಟ !

ಚಳಿಗಾಲದಲ್ಲಿ ವಿಪರೀತ ಚಳಿಯ ಕಾಟ
ಮಲಗಲು ರೆಗ್ಗಿಲ್ಲದೆ ಹೊದಿಕೆಗಾಗಿ ಹುಡುಕಾಟ !

ವಯಸ್ಸಾದ ಮೇಲೆ ಮನೆಯವರೆಲ್ಲರಿಗೂ ಕಾಟ
ಹಾಸಿಗೆಯ ಮೇಲೆ ಬಿದ್ದು ನರಕಯಾತನೆಯ ನೋಟ !

ಸಾಕಪ್ಪ ಸಾಕು ದೇವರೇ ಮಾನವ ಜನ್ಮ !
ಮುಂದಿನ ಜನ್ಮ ಎನ್ನುವುದೊಂದಿದ್ದರೆ

ಹುಟ್ಟಿಸು ನನ್ನನ್ನು ಗಿಡ ಮರವನ್ನಾಗಿ !
ಕೊಡುವೆನು ಸಕಲರಿಗೂ ಆಮ್ಲಜನಕವನ್ನು ಫ್ರೀಯಾಗಿ…!

ಮತ್ತೆ ಹುಟ್ಟಿಸುವುದಾದರೆ ಹುಟ್ಟಿಸು
ಕಪಟವರಿಯದ ಪಕ್ಷಿ ಪ್ರಾಣಿಯನ್ನಾಗಿ !

ಮಾನವರ ಕಾಟವಿಲ್ಲದೆ ಇರುವೆನು
ಜೀವನಪೂರ್ತೀ ಹಾಯಾಗಿ…!!


  • ಪ್ರೊ. ಸಿದ್ದು ಸಾವಳಸಂಗ – ಹಿರಿಯ ಕನ್ನಡ ಉಪನ್ಯಾಸಕರು, ವಿಜಯಪುರ. 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW