ತುಂಗಭದ್ರ ನದಿ ತೀರದ ಹಚ್ಚ ಹಸುರಿನ ಮಧ್ಯೆ ಉಗ್ರನರಸಿಂಹ ದೇಗುಲವಿದೆ. ಇದು ರಂಗಾಪುರದಲ್ಲಿದ್ದು, ದೇಗುಲದ ಸುಂದರ ಚಿತ್ರಣವನ್ನು ಲೇಖಕ, ಪತ್ರಕರ್ತ ಚಂದ್ರು ಕೊಂಚಿಗೇರಿ ಅವರು ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರೆ ಹಿಡಿದಿದ್ದಾರೆ, ಮುಂದೆ ನೋಡಿ…
ತುಂಗಭದ್ರ ನದಿ ತೀರದ ಹಚ್ಚ ಹಸುರಿನ ತಟದಲ್ಲಿರುವ ರಂಗಾಪುರ….ಉಗ್ರನರಸಿಂಹ ದೇಗುಲ…ತ್ರಿಭುನವಮಲ್ಲನಿಂದ ನಿರ್ಮಾಣಗೊಂಡಿದೆ..ಈ ರಂಗಾಪುರ ಬ್ರಿಟಿಷರ ಕಾಲದಲ್ಲೇ ಇದೊಂದು ಕಂದಾಯ ಗ್ರಾಮ.
ಅಂದಿನ ಕಾಲದಲ್ಲೆ ಅತಿ ಹೆಚ್ಚು ಕಂದಾಯ ಪಾವತಿ ಮಾಡುತ್ತಿದ್ದ ಗ್ರಾಮವದು….ಈಗ ಜನ ವಸತಿ ರಹಿತ ಗ್ರಾಮ..ಅಂದು ಹೂವಿನಹಡಗಲಿ ತಾಲೂಕಿನಲ್ಲೇ ಹೈನುಗಾರಿಕೆಗಾರಿಕೆ ಹೆಚ್ಚು ಪ್ರಸಿದ್ದಿಯಾದ ಊರು…ಅಂದು ಆ ಊರಲ್ಲಿ ಮೊಸರು ಮಾರುತ್ತಿದ್ದ ಈರಯ್ಯ ಅವರಿಗೆ ಇಂದಿಗೂ ಮೊಸರು ಮಾರ ಈರಯ್ಯ ಎಂದು ಅಡ್ಡ ಹೆಸರು ಇದೆ….ಹೀಗೆ ವಿಭಿನ್ನ ರೀತಿಯ ಊರನ್ನ ಒಮ್ಮೆ ನೋಡ ಬನ್ನಿ…

- ಚಂದ್ರು ಕೊಂಚಿಗೇರಿ (ಕನ್ನಡ ಪ್ರಭಾ ವರದಿಗಾರರು), ಹಡಗಲಿ
