ಒಂದೇ ನೆಲೆಯಲ್ಲಿ ನಿಲ್ಲದೆ ಮಂಗನಂತೆ ಮರದಿಂದ ಮರಕ್ಕೆ ಹಾರದಿರು ! …ಕನ್ನಡ ಹಿರಿಯ ಉಪನ್ಯಾಸಕರಾದ ಪ್ರೊ. ಸಿದ್ದು ಸಾವಳಸಂಗ ಅವರ ಒಂದು ಕವನವನ್ನು ತಪ್ಪದೆ ಮುಂದೆ ಓದಿ….
ಎಲ್ಲ ಬಲ್ಲೆನೆಂದು ಜಂಭದಿ ಎಲ್ಲೆಯನು ಮೀರದಿರು !
ಒಳ್ಳೆಯ ಆಳದ ಅರಿವಿದೆ ಎಂದು ನೀರಿನ ಸುಳಿಗೆ ಸಿಲುಕಿ ಸಾಯದಿರು !
ತಲೆ ಗಟ್ಟಿಯಿದೆಯೆಂದು ಬಂಡೆಗೆ ಬಡಿದುಕೊಂಡು
ಹನ್ನೆರಡು ಹೋಳು ಮಾಡಿಕೊಳ್ಳದಿರು !
ನಾನೇ ರಾಜನೆಂದು ಅಹಂಕಾರದಲಿ ದಟ್ಟಡವಿಯಲಿ
ಅಡ್ಡಾಡಿ ಕಾಡು ಪ್ರಾಣಿಗಳಿಗೆ ಬಲಿಯಾಗದಿರು !
ನನ್ನಥಾಂರಿಲ್ಲ ಸರ್ವಜ್ಞನೆಂದು ಗರ್ವದಿ ವರ್ತಿಸದಿರು !
ಪುಣ್ಯದ ಕೆಲಸ ಮಾಡದೆ ಪಾಪಿಷ್ಟನಾಗಿ
ಸಮಾಜದ ಜನರ ನಿಂದೆಗೆ ಗುರಿಯಾಗದಿರು !
ಒಂದೇ ನೆಲೆಯಲ್ಲಿ ನಿಲ್ಲದೆ ಮಂಗನಂತೆ
ಮರದಿಂದ ಮರಕ್ಕೆ ಹಾರದಿರು !
ಹೆಂಗಳೆಯರ ಮುಂದೆ ಉತ್ತರ ಕುಮಾರನಂತೆ
ಮೀಸೆ ತಿರುವಿ ಮೆರೆಯದಿರು !!
ಸಭೆಯಲ್ಲಿ ಬೆಕ್ಕಿನಂತೆ ಅಡ್ಡಡ್ಡ ಬಂದು ದಡ್ಡನಾಗದಿರು !
ಅಲ್ಪ ಜ್ಞಾನಿ ಮಹಾ ಗರ್ವಿಯೆನ್ನುವಂತೆ
ಅಹಂಕಾರದಿ ನಾನೇ ದೊಡ್ಡವನೆಂದು ಎದೆಸೆಟಿಸಿ ನೆಲವನ್ನು ನೋಡದೆ ಕಲ್ಲುತಾಗಿ ಮೂವತ್ತೆರಡು
ಹಲ್ಲು ಮುರಿದುಕೊಳ್ಳದಿರು !
ಸಜ್ಜನರ ಮುಂದೆ ಗರ್ವ ತೋರಿ
ದುರ್ಜನರಲಿ ದುರ್ಜನರ ಗುರುವಾಗದಿರು !
ಸುಮ್ಮನೆ ಮಹಿಳೆಯರ ಕೆಣಕಿ ಕಪಾಳ
ಮೋಕ್ಷ ಮಾಡಿಕೊಳ್ಳದಿರು !
ಬಡವರ ಮುಂದೆ ಬಡಿವಾರ ತೋರಿ
ಅವರ ಹೊಟ್ಟೆಯನ್ನು ಉರಿಸದಿರು !
ಸತ್ಯದ ಜೇನುಗೂಡಿಗೆ ಕಲ್ಲು ಹೊಡೆದು ಸುಳ್ಳಿನ ಸರವನ್ನು ಹೊರಳಲ್ಲಿ ಹಾಕಿಕೊಳ್ಳದಿರು !
ನಾನೇ ಮಹಾ ಸತ್ಯಹರಿಶ್ಚಂದ್ರನಿನೆಸಿಕೊಳ್ಳಲು
ಉಳಿದವರೆಲ್ಲರೂ ಸರಿಯಿಲ್ಲವೆಂದು
ಬೆರಳ ತೋರಿ ಸುಳ್ಳು ಬೊಗಳದಿರು !!
ಒಂದು ಬೆರಳು ಬೇರೆಯವರಿಗೆ ನೀನು
ತೋರಿದರೆ ನಾಲ್ಕು ಬೆರಳುಗಳು ನೀನೇ
ದುಷ್ಟನೆಂದು ಸಾರಿ ಹೇಳುತ್ತಿವೆ !!
- ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ.
