ಸತ್ಯದ ಜೇನುಗೂಡಿಗೆ ಕಲ್ಲು ಹೊಡೆಯಬೇಡ…!

ಒಂದೇ ನೆಲೆಯಲ್ಲಿ ನಿಲ್ಲದೆ ಮಂಗನಂತೆ ಮರದಿಂದ ಮರಕ್ಕೆ ಹಾರದಿರು ! …ಕನ್ನಡ ಹಿರಿಯ ಉಪನ್ಯಾಸಕರಾದ ಪ್ರೊ. ಸಿದ್ದು ಸಾವಳಸಂಗ ಅವರ ಒಂದು ಕವನವನ್ನು ತಪ್ಪದೆ ಮುಂದೆ ಓದಿ….

ಎಲ್ಲ ಬಲ್ಲೆನೆಂದು ಜಂಭದಿ ಎಲ್ಲೆಯನು ಮೀರದಿರು !
ಒಳ್ಳೆಯ ಆಳದ ಅರಿವಿದೆ ಎಂದು ನೀರಿನ ಸುಳಿಗೆ ಸಿಲುಕಿ ಸಾಯದಿರು !

ತಲೆ ಗಟ್ಟಿಯಿದೆಯೆಂದು ಬಂಡೆಗೆ ಬಡಿದುಕೊಂಡು
ಹನ್ನೆರಡು ಹೋಳು ಮಾಡಿಕೊಳ್ಳದಿರು !
ನಾನೇ ರಾಜನೆಂದು ಅಹಂಕಾರದಲಿ ದಟ್ಟಡವಿಯಲಿ
ಅಡ್ಡಾಡಿ ಕಾಡು ಪ್ರಾಣಿಗಳಿಗೆ ಬಲಿಯಾಗದಿರು !

ನನ್ನಥಾಂರಿಲ್ಲ ಸರ್ವಜ್ಞನೆಂದು ಗರ್ವದಿ ವರ್ತಿಸದಿರು !
ಪುಣ್ಯದ ಕೆಲಸ ಮಾಡದೆ ಪಾಪಿಷ್ಟನಾಗಿ
ಸಮಾಜದ ಜನರ ನಿಂದೆಗೆ ಗುರಿಯಾಗದಿರು !

ಒಂದೇ ನೆಲೆಯಲ್ಲಿ ನಿಲ್ಲದೆ ಮಂಗನಂತೆ
ಮರದಿಂದ ಮರಕ್ಕೆ ಹಾರದಿರು !
ಹೆಂಗಳೆಯರ ಮುಂದೆ ಉತ್ತರ ಕುಮಾರನಂತೆ
ಮೀಸೆ ತಿರುವಿ ಮೆರೆಯದಿರು !!

ಸಭೆಯಲ್ಲಿ ಬೆಕ್ಕಿನಂತೆ ಅಡ್ಡಡ್ಡ ಬಂದು ದಡ್ಡನಾಗದಿರು !
ಅಲ್ಪ ಜ್ಞಾನಿ ಮಹಾ ಗರ್ವಿಯೆನ್ನುವಂತೆ
ಅಹಂಕಾರದಿ ನಾನೇ ದೊಡ್ಡವನೆಂದು ಎದೆಸೆಟಿಸಿ ನೆಲವನ್ನು ನೋಡದೆ ಕಲ್ಲುತಾಗಿ ಮೂವತ್ತೆರಡು
ಹಲ್ಲು ಮುರಿದುಕೊಳ್ಳದಿರು !

ಸಜ್ಜನರ ಮುಂದೆ ಗರ್ವ ತೋರಿ
ದುರ್ಜನರಲಿ ದುರ್ಜನರ ಗುರುವಾಗದಿರು !
ಸುಮ್ಮನೆ ಮಹಿಳೆಯರ ಕೆಣಕಿ ಕಪಾಳ
ಮೋಕ್ಷ ಮಾಡಿಕೊಳ್ಳದಿರು !

ಬಡವರ ಮುಂದೆ ಬಡಿವಾರ ತೋರಿ
ಅವರ ಹೊಟ್ಟೆಯನ್ನು ಉರಿಸದಿರು !
ಸತ್ಯದ ಜೇನುಗೂಡಿಗೆ ಕಲ್ಲು ಹೊಡೆದು ಸುಳ್ಳಿನ ಸರವನ್ನು ಹೊರಳಲ್ಲಿ ಹಾಕಿಕೊಳ್ಳದಿರು !

ನಾನೇ ಮಹಾ ಸತ್ಯಹರಿಶ್ಚಂದ್ರನಿನೆಸಿಕೊಳ್ಳಲು
ಉಳಿದವರೆಲ್ಲರೂ ಸರಿಯಿಲ್ಲವೆಂದು
ಬೆರಳ ತೋರಿ ಸುಳ್ಳು ಬೊಗಳದಿರು !!

ಒಂದು ಬೆರಳು ಬೇರೆಯವರಿಗೆ ನೀನು
ತೋರಿದರೆ ನಾಲ್ಕು ಬೆರಳುಗಳು ನೀನೇ
ದುಷ್ಟನೆಂದು ಸಾರಿ ಹೇಳುತ್ತಿವೆ !!


  • ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW