“ಯಾಕೆ ಸುಮ್ಮನೆ ಕುಳಿತೆ ಸೀತೆ?”- ಸಿದ್ದುಯಾದವ್ ಚಿರಿಬಿ



“ಯಾಕೆ ಸುಮ್ಮನೆ ಕುಳಿತೆ ಸೀತೆ?”…ಸೀತೆಯ ಮೌನಕ್ಕೆ ಕಾರಣವೇನೆಂದು ಹುಡುಕುವ ಕವಿಯ ಪ್ರಯತ್ನ ಸೊಗಸಾಗಿದೆ, ಸಿದ್ದುಯಾದವ್ ಚಿರಿಬಿ ಅವರ ಕವಿತೆ ಓದುಗರ ಮಡಿಲಲ್ಲಿ, ಮುಂದೆ ಓದಿ…

ಜನಕಾ ರಾಯನು ತೊರೆದು
ಶ್ರೀರಾಮಚಂದ್ರನ ಮಡಿಲರಸಿ
ಸೂರ್ಯವಂಶದ ಪಟ್ಟದರಸಿಯಾದೆ
ನರಕದ ನಾಕಕ್ಕೆ ಬಲಿಯಾದೆ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಪಟ್ಟಧರಿಸಿಯಾದೆ ಕಾನನದ ಪಾಲಾದೆ
ಪತಿ ಜೊತೆ ನಡೆದಾಡಿದ ದಾರಿಯಲಿ
ಕಲ್ಲು ಮುಳ್ಳುಗಳುಡುಕದೆ ಮೌನದಿ ನಡೆದೆ
ಏಕಪತ್ನಿ ವ್ರತಸ್ಥನ ಒಂದು ಮಾತು ಕೇಳದೆ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ರಾವಣನ ಕಪಡದಲ್ಲಿ ಪತಿ ಜೀವಕ್ಕಂಜಿ
ಬಲಿಯಾದೆ ನೀ ಅವನಾಟದ ಪಗಡೆಯಲಿ
ಅಶೋಕವನದ ತಳಿರಿನ ತಂಪಿನಲಿ
ಮೌನದ ಕಂಗಳ ತುಂಬ ಶೋಕದ ನೆರಳಿನಲಿ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಅವನ ಸಂಹಾರ ಮರುಹುಟ್ಟು ಪಟ್ಟಧರಸಿ
ಮತ್ತೊಮ್ಮೆ ಸೀಡಿಲು ಬಡಿಯಿತೆ ಅಗ್ನಿಯ ದಾಳಕೆ
ಪರಪುರುಷನ ಸೊಕಲಾರದ ಮೈ ಪರಿಕ್ಷೇಯಲಿ
ಅಗ್ನಿಯ ತೆಕ್ಕೆಗೆ ನೋಕಿದಾಗಲು ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಎಲ್ಲಾವು ಮುಗಿಯಿತು ರಾಜ್ಯ ವೈಭೋಗದಿ
ನೆಮ್ಮದಿಯ ನಿಟ್ಟುಸಿರಿಗೆ ಮಡಿಲಲ್ಲಿ ತುಂಬಿತ್ತು
ತುಂಬು ಗರ್ಭಿಣಿಯ ಮನವರಸಿತು ವನ ತಂಗಾಳಿ
ಅಲ್ಪಾಗಸನ ನುಡಿಗಲ್ಲಿ ಬಲಿಯಾದೆ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಲವ-ಕುಶರ ಜನನ ಸಂತಸದ ಜೀವನ
ಮಕ್ಕಳೊಳಗೂಡಿ ವಾಲ್ಮಿಕಿಯ ಆಶ್ರಮ
ಅಶ್ವಮೇಗದ ಯಾಗ ಕುದುರೆಯ ಕಟ್ಟಿ
ತಂದೆಯೊಂದಿಗೆ ಮಕ್ಕಳು ಯುದ್ದಕ್ಕಿಳಿದಾಗ ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?

ಜಗದ ನೋಟದಲಿ ಪತಿರ್ವತೆ ನೀನಾದೆ
ಶ್ರೀರಾಮಚಂದ್ರನ ಆದರ್ಶ ಪತಿಯಾದ
ಹೆಣ್ಣೆ ನೀ ಗಂಡಿನ ತೆಕ್ಕೆಯಲಿ ಪಳಗಿಬಿಟ್ಟೆಯಾ?
ಮರು ಮಾತನಾಡದೆ ಅವನಿಟ್ಟಡಿಯಲ್ಲಿಟ್ಟೆ
ಯಾವ ಸಂತೊಕ್ಕಾಗಿ ಕಷ್ಟವನುಂಡೆ ಹೇಳು ನೀ
ಯಾಕೆ ಸುಮ್ಮನೆ ಕುಳಿತೆ ಸೀತೆ?


  • ಸಿದ್ದುಯಾದವ್ ಚಿರಿಬಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW