ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಸಾಹಿತಿ ವಿಷ್ಣುನಾಯ್ಕರು ತಮ್ಮ ಹಲವಾರು ಕೃತಿಗಳ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಲೇಖಕರಾದ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಇನ್ನೂರು ಹನಿಗಳು
ಲೇಖಕರು: ವಿಷ್ಣು ನಾಯ್ಕ
ಪ್ರಕಾಶನ : ಪರಿಮಳ ಪ್ರಕಾಶನ ಅಂಕೋಲ
ಮುದ್ರಣದ ವರ್ಷ : ೨೦೧೮
ಪುಟಗಳು : ೧೦೦
ಬೆಲೆ : ೮೦
ಒಂದು ದೀರ್ಘ ಕವನದ ಹಿಂದಿನ ಮತ್ತು ಮುಂದಿನ ನುಡಿಗಳ ಸಂಬಂಧದಿಂದ ಮುಕ್ತಾಯಗೊಂಡ ಇವನ್ನು “ಮುಕ್ತಕ ಅಥವಾ ಹನಿಗವನ “ಎನ್ನಬಹುದು. ‘ಚುಟುಕು ಬ್ರಹ್ಮ’ ಎಂದೇ ಖ್ಯಾತರಾದ ದಿನಕರ ದೇಸಾಯಿ ಅವರ ಅನೇಕ ಚುಟುಕು, ಚೌಪದಿಗಳನ್ನು ಬಹುವಾಗಿ ಮೆಚ್ಚಿಕೊಂಡ ತಾವು ಅದೇ ಆಶಯದ ದೃಷ್ಟಿಯಿಂದ ಬರೆದ ಹನಿಗವನಗಳು ಇವೆಂದು ಅವರು ಹೇಳಿದ್ದಾರೆ.

ಮಿತ ಪದಗಳ ಬಳಕೆ, ಸರಳತೆ ಹಾಗೂ ಸಂಕ್ಷಿಪ್ತತೆ ಈ ಕವನಗಳ ವಿಶೇಷತೆ ಎನ್ನಬಹುದು. ಹಾಗಾಗಿ ಇವುಗಳ ಬಗ್ಗೆ ಮತ್ತೆ ವಿವರಣೆ ಅಗತ್ಯವಿಲ್ಲ. ಅಲ್ಲವೇ?. ಸುಮಾರು ೨೦೦ ಮುಕ್ತಕಗಳಿರುವ ಈ ಕೃತಿಯಲ್ಲಿ ನನಗೆ ತುಂಬಾ ಮೆಚ್ಚುಗೆಯೆನಿಸಿದ ಇವು ಹೇಗಿದೆ ನೋಡಿ.

*ಧನ್ಯತೆ.
ಬಾಗಿದ
ಬಾಳೆಗೆ
ಗೊನೆ ತುಂಬ
ಹಣ್ಣುಗಳು!
ಈ ಮೇಲಿನ ನಾಲ್ಕಾರೇ ಶಬ್ಧಗಳು ಅದೆಷ್ಟು ಅರ್ಥವಂತಿಕೆ ಇದೆಯಲ್ಲವೇ?
* ಬೆಳಕು
ಬೆಳಕೇ ಅಲ್ಲ;
ಕತ್ತಲೆಯ
ಸುಖದಣ್ಣ!
* ಹೆತ್ತವರಿಗೆ
ಕಲ್ಪನಾ ಚಾವ್ಲಾಗೆ
ಮಂಗಳನ
ಲೋಕ
ಹೆತ್ತ ತಾಯ್ತಂದೆಯರಿಗೆ
ಮಗಳದೇ
ಶೋಕ!
* ಸಲಹೆ – ಸಿಟ್ಟು.
‘ಹತ್ತು ಹೆತ್ತವಳಾಗು ‘
ಹರಸಿದನು
ಪೂಜಾರಿ
ಧುಮು ಧುಮಿಸುತ ನಿಂತು
‘ಥೂ ‘ಎಂದಳು
ನಾರಿ!
* ತಾಯಿ ದೇವರು.
‘ತಾಯಿ ದೇವರೆಂದು ವೇದ
ಬಾಯಿ ಬಿಟ್ಟು ಹೇಳುತಿಹುದು ‘
ಅದಕೆ ಅವಳ ಮನೆಯಲಿಟ್ಟು
ಮಕ್ಕಳೆಲ್ಲ ಹಾರುತಿಹರು!
*ಬುದ್ಧ.
ಮನಸಿನ
ಯುದ್ಧ
ಗೆದ್ದವ
ಬುದ್ಧ!
ಬದಲಾದ ಕಾಲದ ಒತ್ತಡದ ಅಶಾಂತಿಯ ದಿನಗಳಲ್ಲಿ ಚಿಂತಿಸುತ್ತಲೇ ನೆಮ್ಮದಿ ಕಳೆದುಕೊಂಡು ಬಾಳುವ ಮನುಜರಿಗೆ ಅನ್ವಯಿಸುವ ನಿಜವಾದ ಮಾತು ಇದು ಎನಿಸುವುದಿಲ್ಲವೇ?…
* ದುಷ್ಟ
ಹುಡುಕಿಯೇ
ಹುಡುಕಿದರು
ಹೊರಗೆಲ್ಲೂ
ಸಿಗಲಿಲ್ಲ!
ಇಂದಿನ ದಿನಗಳಲ್ಲಿ ನಮ್ಮಲ್ಲೇ ಇರುವ ಸಾಕಷ್ಟು ಅವಗುಣಗಳನ್ನು ತಿಳಿಯದ ನಾವು ಇಂತಹ ಸಾಲುಗಳನ್ನು ಓದಿಯೇ ಅರಿವು ಮೂಡಿಸಿ ಕೊಳ್ಳುವ ಜರೂರು ಇದೆ… ಎಂದೆನಿಸಿತು ನನಗೆ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ‘ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!’ ಕೃತಿ ಪರಿಚಯ
- ‘ಪದ್ದಣ ಮನೋರಮೆ’ ಕೃತಿ ಪರಿಚಯ
- ‘ಬ್ರಹ್ಮರಾಕ್ಷಸ’ ಕೃತಿ ಪರಿಚಯ
- ‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ
- ‘ಅಮ್ರಪಾಲಿ’ ಪುಸ್ತಕ ಪರಿಚಯ
- ‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ
- ‘ಕೇದಗೆ ಪುಷ್ಪ’ ಕೃತಿ ಪರಿಚಯ
- ‘ಬಂಕಿಮಚಂದ್ರರ ಶ್ರೇಷ್ಠ ಕತೆಗಳು’ ಕೃತಿ ಪರಿಚಯ
- ‘ಸೀಳುದಾರಿ’ ಪುಸ್ತಕ ಪರಿಚಯ
- ‘ಲವ್ ಟುಡೆ’ ಕೃತಿ ಪರಿಚಯ
- ‘ಕ್ಲಾಸ್ ಟೀಚರ್’ ಕೃತಿ ಪರಿಚಯ
- ‘ಒಂದು ಎಂಟಾಣೆಯ ಕಥೆ’ ಕೃತಿ ಪರಿಚಯ
- ‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿ ಪರಿಚಯ
- ‘ಮಾಸದ ವಿಜಯ’ ಕೃತಿಯ ಪರಿಚಯ
- ‘ಅರಳಿಮರ’ ಪುಸ್ತಕ ಪರಿಚಯ
- ‘ಆಸೆಯ ಅಲೆಗಳ ಮೇಲೆ’ ಕೃತಿ ಪರಿಚಯ
- ‘ಬರ್ಬರಿಕ’ ಕೃತಿ ಪರಿಚಯ
- ‘ನನ್ನ ದನಿಗೆ ನಿನ್ನ ದನಿಯು’ ಕೃತಿ ಪರಿಚಯ
- ‘ಅಂತರಂಗ’ ಕೃತಿ ಪರಿಚಯ
- ‘ಕಾಡುಬಳ್ಳಿ’ ಕೃತಿ ಪರಿಚಯ
- ‘ನಂಟು’ ಪುಸ್ತಕ ಪರಿಚಯ
- ‘ಶಕುನದ ಹಕ್ಕಿ’ ಕೃತಿ ಪರಿಚಯ
- ‘ಪರ್ಷಿಯಾ ಪರಿಮಳ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.
